ಧಾರವಾಡ –
ಸದಾ ಒಂದಿಲ್ಲೊಂದು ವಿಶೇಷ ಕಾರ್ಯಗಳ ಮೂಲಕ ವಿಶೇಷವಾಗಿ ಗುರುತಿಸಿಕೊಂಡು ಮಾದರಿಯಾಗುತ್ತಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಈಗ ಬೆಳಕಿನ ಹಬ್ಬ ದೀಪಾವಳಿ ದಿನ ದಂದು ಮತ್ತೊಂದು ವಿಶೇಷ ಕಾರ್ಯದ ಮೂಲಕ ದೇಶಕ್ಕೆ ಮಾದರಿಯಾಗಿದ್ದಾರೆ.
ಹೌದು ಈಗಾಗಲೇ ಸಂಸದರಾಗಿ ಸಧ್ಯ ಕೇಂದ್ರ ಸಚಿವರಾಗಿ ಹಲವಾರು ವಿಶೇಷ ಕಾರ್ಯಕ್ರಮ ಗಳ ಮೂಲಕ ಮಾದರಿ ಯಾಗುತ್ತಿರುವ ಹಾಗೆ ರಾಜಕೀಯ ದೊಂದಿಗೆ ಸಾಮಾಜಿಕ ಜವಾಬ್ದಾರಿ ಹೇಗೆ ಇರಬೇಕು ಎಂಬೊದನ್ನು ತಮ್ಮ ಕೆಲಸ ಕಾರ್ಯಗಳ ಮೂಲಕ ಮಾದರಿಯಾಗಿ ಕಾಣುತ್ತಿ ರುವ ಪ್ರಹ್ಲಾದ್ ಜೋಶಿ ಅವರು ದೀಪಾವಳಿ ಹಬ್ಬದಂದು ಮತ್ತೊಂದು ಐತಿಹಾಸಿಕ ಕಾರ್ಯದ ಮೂಲಕ ಮೆಚ್ಚುವ ಕಾರ್ಯಕ್ಕೆ ಸಾಕ್ಷಿಯಾಗಿ ಹೊಸದೊಂದು ಮುನ್ನುಡಿಯನ್ನು ಬರೆದರು.
ಈಗಾಗಲೇ 2025ರೊಳಗೆ ಭಾರತವನ್ನು ಕ್ಷಯರೋಗ ಮುಕ್ತಗೊಳಿಸುವ ಸಲುವಾಗಿ ಪ್ರಧಾನಮಂತ್ರಿ ಕ್ಷಯ ಮುಕ್ತ ಭಾರತ ಎಂಬ ಜನಜಾಗೃತಿ ಅಭಿಯಾನಕ್ಕೆ ಕರೆ ಕೊಟ್ಟಿದ್ದು ಈ ಒಂದು ಅಭಿಯಾನಕ್ಕೆ ಕೇಂದ್ರ ಸಚಿವರಾಗಿರುವ ಪ್ರಹ್ಲಾದ್ ಜೋಶಿ ಅವರು ಕೂಡಾ ಹೆಮ್ಮೆಯಿಂದ ಕೈಜೋಡಿಸಿದ್ದು ಕೇವಲ ಹೇಳದಂತೆ ನಡೆದುಕೊ ಳ್ಳದೇ ಮಾತಿನಲ್ಲೂ ಕೂಡಾ ನಡೆದುಕೊಂಡಿದ್ದಾರೆ
ಅದು ತಮ್ಮದೇಯಾದ ಲೋಕಸಭಾ ಕ್ಷೇತ್ರದಲ್ಲಿನ ಹತ್ತು ಕ್ಷಯರೋಗಿಗಳನ್ನು ದತ್ತು ತಗೆದುಕೊಂ ಡಿದ್ದು ತಮ್ಮ ಕುಟುಂಬದರೊಂದಿಗೆ ಸಡಗರ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸಿ ದಂತೆ ತಾವು ದತ್ತು ತಗೆದುಕೊಂಡ ಹತ್ತು ರೋಗಿ ಗಳು ಕೂಡಾ ಸಂಭ್ರಮದಿಂದ ಹಬ್ಬವನ್ನು ಆಚರಿ ಸಲಿ ಎಂದುಕೊಂಡು ಅವರಿಗೆ ದೀಪಾವಳಿಯ ಉಡುಗೊರೆಯನ್ನು ನೀಡಿದರು.
ಹುಬ್ಬಳ್ಳಿಯಲ್ಲಿ ಗೃಹ ಕಚೇರಿಯಲ್ಲಿ ಅವರಿಗೆ ಆರೋಗ್ಯ ಇಲಾಖೆಯ ಅಧಿಕಾರಿಗಳ ಮೂಲಕ ಹಸ್ತಾಂತರ ಮಾಡಿದರು ಸೇವೆಯೇ ಸಮರ್ಪಣೆ ಎಂಬ ಪರಿಕಲ್ಪನೆಯಂತೆ ದೀಪಾವಳಿಯ ಉಡು ಗೊರೆಯನ್ನು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಹಸ್ತಾಂತರಿಸಿದರು.ಸಮಾಜದಲ್ಲಿ ಎಲ್ಲರೂ ಸಮಾನರು ಎಂಬ ಭಾವನೆ ಮೂಡಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂಬ ಸಂದೇಶದೊಂದಿಗೆ ಕೇಂದ್ರ ಸಚಿವರು ಈ ಒಂದು ರೋಗಿಗಳಿಗೆ ಸಮಾಜಕ್ಕೆ ನೀಡಿ ರಾಜಕಾರ ಣಿಗಳಿಗೆ ಕೇವಲ ರಾಜಕಾರಣ ಇರಬಾರದು ಇದರೊಂದಿಗೆ ಸಾಮಾಜಿಕ ಜವಾಬ್ದಾರಿ ಇರಬೇಕು ಎಂಬೊದನ್ನು ಈ ಒಂದು ಕಾರ್ಯದ ಮೂಲಕ ಕೇಂದ್ರ ಸಚಿವರು ತೋರಿಸಿಕೊಟ್ಟರು.
ಈ ಒಂದು ಸಮಯದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಕೇಂದ್ರ ಸಚಿವರ ಆಪ್ತ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ ಸೇರಿದಂತೆ ಹಲವರು ಈ ಒಂದು ಸಮಯದಲ್ಲಿ ಉಪಸ್ಥಿತರಿದ್ದರು.
ವರದಿ – ಚಕ್ರವರ್ತಿ ಹಿರಿಯ ವರದಿಗಾರರು ಸುದ್ದಿ ಸಂತೆ ಡೆಸ್ಕ್