ಹಾವೇರಿ –
ಮಳೆಯಿಂದ ಹಾನಿಯಾದ ಮನೆಗೆ ಬಿಡುಗಡೆಯಾದ ಹಣವನ್ನು ನೀಡಲು ಹಣಕ್ಕೆ ಬೇಡಿಕೆ ಇಟ್ಟಿದ್ದ ಪಿಡಿಓ ರೊಬ್ಬರು ಎಸಿಬಿ ಬಲೆಗೆ ಬಿದ್ದ ಹಾವೇರಿಯಲ್ಲಿ ನಡೆದಿದೆ. ಹೌದು 5 ಸಾವಿರ ಲಂಚ ಪಡೆಯವಾಗ ಸಿಕ್ಕಿಬಿದ್ದಿದ್ದಾರೆ ಈ ಪಿಡಿಓ ಅಧಿಕಾರಿ.ಹಾವೇರಿ ಜಿಲ್ಲೆಯ ಸವಣೂರು ತಾಲೂಕಿ ನ ಮಂತ್ರೋಡಿ ಗ್ರಾಮದಲ್ಲಿ ಈ ಒಂದು ದಾಳಿಯಾಗಿದ್ದು ಎಸಿಬಿ ಬಲೆಗೆ ಬಿದ್ದಿದ್ದಾರೆ.
ಮಂತ್ರೋಡಿ ಗ್ರಾಮ ಪಂಚಾಯತಿಯ ಗ್ರಾಮಾಭಿವೃದ್ದಿ ಅಧಿಕಾರಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.ಈಶ್ವರಪ್ಪ್ ಎನ್ ಸಿಕ್ಕಿ ಬಿದ್ದ ಅಧಿಕಾರಿಯಾಗಿದ್ದು ಸಿದ್ದಪ್ಪ ಕಳಲಕೊಂ ಡರ ಎಂಬುವವರಿಂದ ಹಣ ಪಡೆಯುವಾಗ ಸಿಕ್ಕಿಬಿದ್ದಿದ್ದು ದಾಳಿಯಾಗಿದ್ದು ಮನೆಗೆ ಬಿಡುಗಡೆಯಾದ ಹಣ ನೀಡಲು ಹತ್ತು ಸಾವಿರ ಕೇಳಿದ್ದರು ಈ ಪಿಡಿಓ.ಹಣ ಕೇಳಿದ ವಿಚಾರ ಕುರಿತಂತೆ ದೂರುದಾರರು ಎಸಿಬಿ ಗೆ ದೂರನ್ನು ನೀಡಿದ್ದು ಹಣ ತೆಗೆದುಕೊಳ್ಳುವಾಗ ದಾಳಿಯಾಗಿದ್ದು ಎಸಿಬಿ ಎಸ್ಪಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಹಾಗೂ ಪಿಎಸೈ ನೇತೃತ್ವ ದಲ್ಲಿ ದಾಳಿಯಾಗಿದ್ದು ಮುಂದಿನ ಕಾರ್ಯವನ್ನು ಕೈಗೊಂ ಡಿದ್ದಾರೆ.