This is the title of the web page
This is the title of the web page

Live Stream

[ytplayer id=’1198′]

April 2025
T F S S M T W
 12
3456789
10111213141516
17181920212223
24252627282930

| Latest Version 8.0.1 |

Local News

ಬನಶಂಕರಿ ಬಡಾವಣೆ, ಮೂಕಾಂಬಿಕಾ ನಗರದಲ್ಲಿ ರಸ್ತೆ ಕಾಮಗಾರಿಗೆ ಪೂಜಾ ಕಾರ್ಯಕ್ರಮ – ಶಾಸಕ ಅಮೃತ ದೇಸಾಯಿ ಅವರಿಂದ

WhatsApp Group Join Now
Telegram Group Join Now

ಧಾರವಾಡ –

ಧಾರವಾಡದ ಗ್ರಾಮೀಣ ಕ್ಷೇತ್ರದ ಶಾಸಕರಾದ ಅಮೃತ ದೇಸಾಯಿ ಅವರ ಕ್ಷೇತ್ರದಲ್ಲಿನ ವಾರ್ಡ್ 3 ರ ಎರಡು ಬಡಾವಣೆಗಳಲ್ಲಿ ದಿನಾಂಕ 17/1/2021 ರವಿವಾರ ಸಾಯಂಕಾಲ 4 ಗಂಟೆಗೆ ರಸ್ತೆಯ ಕಾಮಗಾರಿಗೆ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಯುವ ಮುಖಂಡ ಸಂತೋಷ ದೇವರಡ್ಡಿ ಹೇಳಿದ್ದಾರೆ.

ಜನಪ್ರಿಯ ಶಾಸಕರು ಅಮೃತ ದೇಸಾಯಿಯವರ ಕ್ಷೇತ್ರದ ವಾರ್ಡ 3ರ ಕುಮಾರೇಶ್ವರ ನಗರದ ಬನಶಂಕರಿ ಬಡಾವಣೆಯಲ್ಲಿ 14 ಲಕ್ಷ ರೂಪಾಯಿ ವೆಚ್ಚದ ರಸ್ತೆ ನಿರ್ಮಾಣಕ್ಕೆ ಮೊದಲು ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಇದರೊಂದಿಗೆ ಮೂಕಾಂಬಿಕಾ ನಗರದಲ್ಲಿ ಸುಂದರ ನಗರವರೆಗೆ 6 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ಸುಧಾರಣೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರಾದ ಅಮೃತ ದೇಸಾಯಿ ಅವರು ಚಾಲನೆ ನೀಡಲಿದ್ದಾರೆ.

ಇವೆರಡು ಬಡಾವಣೆಯಲ್ಲಿ ನಾಳೆ ರಸ್ತೆ ಕಾಮಗಾರಿಗೆ ಪೂಜೆ ನಡೆಯಲಿದ್ದು ಬಡಾವಣೆಗಳ ನಿವಾಸಿಗಳು ಹಿರಿಯರು ಸೇರಿದಂತೆ ಹಲವರು ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪಸ್ಥಿತರಿದ್ದು ಯಶಸ್ವಿಗೊಳಿಸುವಂತೆ ಬಿಜೆಪಿ ಯುವ ಮುಖಂಡ ಸಂತೋಷ ದೇವರಡ್ಡಿ ,ಶಾಸಕರ ಆಪ್ತಕಾರ್ಯದರ್ಶಿ ಮಂಜು ಹಿರೇಮಠ , ಪ್ರಕಾಶ ಕಟ್ಟಿ ಕೋರಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk