ಬೆಂಗಳೂರು –
ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಮಹೋ ತ್ಸವವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟಿಸಲಿ ದ್ದಾರೆ.ಹೌದು ದಸರಾ ಉದ್ಘಾಟನೆಗೆ ಯಾರನ್ನು ಕರೆಯ ಬೇಕೆಂದು ಚರ್ಚೆಯ ನಡುವೆ ಅಚ್ಚರಿಯ ಗಣ್ಯರನ್ನು ಆಹ್ವಾನ ಮಾಡಲು ರಾಜ್ಯ ಸರ್ಕಾರ ಆದೇಶವನ್ನು ಮಾಡಿದೆ
ಪ್ರಸಕ್ತ ವರ್ಷದ ಮೈಸೂರು ದಸರಾ ಮಹೋತ್ಸವವನ್ನು ರಾಷ್ಟ್ರಪತಿಗಳು ಉದ್ಘಾಟಿಸಲಿದ್ದಾರೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮೈಸೂರು ದಸರಾ ಉದ್ಘಾಟನೆಗೆ ಈ ಬಾರಿ ಯಾರನ್ನು ಕರೆಯಬೇಕೆಂದು ಚರ್ಚೆ ಮಾಡಿದ್ದೆವು ಅಂತಿಮವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕರೆಯಲು ತೀರ್ಮಾನಿಸಿದೆವು ದಸರಾ ಉದ್ಘಾಟನೆಗೆ ಬರುವಂತೆ ರಾಷ್ಟ್ರಪತಿಗಳನ್ನು ಆಹ್ವಾನಿಸಿದ್ದು ಅವರು ಒಪ್ಪಿಕೊಂಡಿ ದ್ದಾರೆ ಎಂದರು.
ಈ ಸಲ ರಾಷ್ಟ್ರಪತಿಗಳು ದಸರಾ ಮಹೋತ್ಸವ ಉದ್ಘಾಟಿ ಸಲಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ.ಸೆಪ್ಟಂಬರ್ 26 ರಂದು ದಸರಾ ಮಹೋತ್ಸವ ಆರಂಭವಾಗಲಿದೆ. ಸಿದ್ಧತೆ ಗಾಗಿ ಪೂರ್ವಭಾವಿ ಸಭೆ ನಡೆಸಿದ ಬಳಿಕ ರಾಷ್ಟ್ರಪತಿಗಳಿಗೆ ಪತ್ರ ಬರೆಯಲಾಗಿತ್ತು.ನಮ್ಮ ಆಹ್ವಾನಕ್ಕೆ ಸಮ್ಮತಿಸಿ ಅವರು ಮರು ಪತ್ರ ಬರೆದಿದ್ದಾರೆ.ದಸರಾ ಉದ್ಘಾಟನೆಗೆ ಬರುವುದಾಗಿ ಒಪ್ಪಿದ್ದಾರೆ ಎಂದು ಹೇಳಿದರು.