ಬೆಂಗಳೂರು –
ಕನ್ನಡ ಚಿತ್ರರಂಗದ ಹಿರಿಯ ನಟ ಲೋಹಿತಾಶ್ವ ನಿಧನರಾಗಿದ್ದಾರೆ. ಹೌದು ಕನ್ನಡದ ಹಿರಿಯ ನಟ ಲೋಹಿತಾಶ್ವ ಅವರು ವಿಧಿವಶರಾಗಿದ್ದಾರೆ, ಇಂದು ಮಧ್ಯಾಹ್ನ ಅವರು ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರುಅಕ್ಟೋಬರ್ 4ರಂದು ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಆದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ಇಂದು ವಿಧಿವಶರಾಗಿದ್ದಾರೆ. ಮೂಲತಃ ತುಮಕೂರಿನ ತೊಂಡಗೆರೆ ಗ್ರಾಮದವರಾದ ಲೋಹಿತಾಶ್ವ ಅವರು 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆಂಗ್ಲ ಪ್ರಾಧ್ಯಾಪ ಕಾರಾಗಿ ಅವರು ತಮ್ಮನ್ನು ಗುರುತಿಸಿಕೊಂಡಿದ್ದ ರು.ಶರತ್ ಲೋಹಿತಾಶ್ವ ಇವರು ಜನಿಸಿದ್ದು ತುಮಕೂರು ಜಿಲ್ಲೆಯಲ್ಲಿ
ಶರತ್ ಲೋಹಿತಾಶ್ವ ಅವರಿಗೆ ಲಭಿಸಿದ ಪ್ರಶಸ್ತಿಗಳು:
ಕರ್ನಾಟಕ ರಾಜ್ಯ ಪ್ರಶಸ್ತಿ – ಉತ್ತಮ ಸಹಾಯ ಪಾತ್ರ – 2013.
ಉದಯ ಸನ್ ಫಿಸ್ಟ್ ಪ್ರಶಸ್ತಿ – ಉತ್ತಮ ಖಳನಾಯಕ – ಆ ದಿನಗಳು (2008).
ಏರ್ ಟೆಲ್ ಕಸ್ತೂರಿ ಪ್ರಶಸ್ತಿ – ಉತ್ತಮ ಖಳನಾಯಕ – ಆ ದಿನಗಳು (2008).
ಮೈಸೂರು ಮಿನಿರಲ್ಸ್ ಪ್ರಶಸ್ತಿ – ಉತ್ತಮ ಸಹಾಯ ಪಾತ್ರ – ಆ ದಿನಗಳು (2008).
ಫಿಲ್ಮ್ ಫೇರ್ ಪ್ರಶಸ್ತಿ – ಉತ್ತಮ ಸಹಾಯ ಪಾತ್ರ – ಆ ದಿನಗಳು (2008).
ಫಿಲ್ಮ್ ಫೇರ್ ಪ್ರಶಸ್ತಿ – ಉತ್ತಮ ಸಹಾಯ ಪಾತ್ರ ಕಡ್ಡಿಪುಡಿ ( 2014).
ಹೀಗೆ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡು ಕನ್ನಡ ಚಿತ್ರರಂಗದಲ್ಲಿ ಹಿರಿಯ ಹೆಸರಾಂತ ನಟ ರಾಗಿದ್ದ ಇವರು ಇನ್ನೂ ಕೇವಲ ನೆನಪಾಗಿ ಉಳಿ ದಿದ್ದು ನಿಧನಕ್ಕೆ ನಾಡಿನ ಸಮಸ್ತ ಕನ್ನಡಾಭಿಮಾನಿ ಗಳು ಸಂತಾಪವನ್ನು ಸೂಚಿಸಿ ಭಾವಪೂರ್ಣ ನಮನವನ್ನು ಸಲ್ಲಿಸಿದ್ದಾರೆ.