This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State News

ಕಬ್ಬು ಬೆಳೆಗಾರರ ಸಮಸ್ಯೆಗೆ ಸ್ಪಂದಿಸಿದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ – ಸಿಎಂ ಜೊತೆ ಸಭೆ ನಡೆಸಿ ವಾರದಲ್ಲಿಯೇ ದರ ನಿಗದಿ ಎಂದರು ಸಚಿವರು

WhatsApp Group Join Now
Telegram Group Join Now

ಬೆಂಗಳೂರು

 

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕಬ್ಬು ಬೆಳೆಗಾರರ ಸಮಸ್ಯೆ ಬಿಕ್ಕಟ್ಟಾಗುತ್ತಿದ್ದು ಹೀಗಾಗಿ ಇದನ್ನು ಅರಿತ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ತುರ್ತು ಸಭೆಯನ್ನು ಮಾಡಿ ಕಬ್ಬು ಬೆಳೆಗಾರರ ಸಮಸ್ಯೆಗೆ ಸ್ಪಂದಿಸಿದ್ದಾರೆ.ಹೌದು ಈ ಒಂದು ವಿಚಾರ ಕುರಿತಂತೆ ಈಗಾಗಲೇ ರೈತರ ಮತ್ತು ಸಂಘಟನೆಗಳ ಹೋರಾಟ ಗಡುವು ಮುಗಿದಿದ್ದು ಹೀಗಾಗಿ ರೈತ ಸಂಘಟನೆಗಳ ಮುಖಂಡರ ಜೊತೆ ಸಭೆ ನಡೆಸಿ ಚರ್ಚಿಸಿ ಪ್ರಬಲ ಹೋರಾಟ ರೂಪಿಸ ಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕು ಮಾರ್ ತಿಳಿಸಿದ್ದು

ಇತ್ತ ವಿಕಾಸಸೌಧ ರಾಜ್ಯ ಸರ್ಕಾರದ ಕಬ್ಬು ಖರೀದಿ ನಿಯಂತ್ರಣ ಮಂಡಳಿ ಸಭೆಯಲ್ಲಿ ದರ ನಿಗದಿ ಸಮಸ್ಯೆ ಕುರಿತಂತೆ ಸಚಿವರು ಸಬೆಯನ್ನು ಮಾಡಿದರು ಕೇಂದ್ರ ಸರ್ಕಾರದ ಎಫ್ ಆರ್ ಪಿ ದರ ನಿಗದಿ ಆದೇಶಕ್ಕೆ ಅನುಮೋದನೆ ನೀಡು ವಂತೆ ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇ ನಕೊಪ್ಪ ಸಭೆಯಲ್ಲಿ ಮಂಡಿಸಿದಾಗ ರೈತ ಪ್ರತಿನಿಧಿ ಗಳು ಒಕ್ಕೂರಲಿನಿಂದ ಅನುಮೋದನೆಗೆ ವಿರೋಧ ವ್ಯಕ್ತಪಡಿಸಿದರು ಕಬ್ಬಿನ ಉತ್ಪಾದನಾ ವೆಚ್ಚ ಏರಿಕೆಯಾಗಿರುವ ಕಾರಣ ರಾಜ್ಯ ಸಲಹ ಬೆಲೆ ಹೆಚ್ಚುವರಿ ಆಗಿ ನಿಗದಿ ಮಾಡಬೇಕು ಎಂದರು

ಆಗ ಸಕ್ಕರೆ ಸಚಿವರು ಒಂದು ವಾರದ ಒಳಗಾಗಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಮಂಡಳಿ ಸಭೆ ನಡೆಸಿ ರೈತರಿಗೆ ಉತ್ತಮ ದರ ನೀಡೋಣ ಎಂದರು ಆಗ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಾವು ಪದೇ ಪದೇ ಸಭೆ ನಡೆಸಿ ದರ ನಿಗದಿ ಮುಂದೂಡುವುದು ಸರಿಯಲ್ಲ ರಾಜ್ಯದ ಇತರೆ ರೈತ ಸಂಘಟನೆಗಳ ಸಭೆ ನಡೆಸಿ ತೀರ್ಮಾನ ಕೈಗೊಂಡು ಸಂಘಟಿತ ಪ್ರಬಲ ಹೋರಾಟ ನಡೆಸುವ ತೀರ್ಮಾನ ಕೈಗೊಳ್ಳಬೇಕಾ ಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದಾಗ ಸಚಿವರು ಮುಖ್ಯಮಂತ್ರಿಯವರು ಉತ್ತಮ ದರ ನಿಗದಿಗೆ ಒಪ್ಪಿದ್ದಾರೆ ಒಂದು ವಾರದೊಳಗೆ ತೀರ್ಮಾನ ಕೈಗೊಳ್ಳಲು ಅವಕಾಶ ಕೊಡಿ ಎಂದರು ಕಟಾವು ಸಾಗಾಣಿಕೆ ವೆಚ್ಚ ದ್ವಿಪಕ್ಷಿಯ ಒಪ್ಪಂದ ಪತ್ರ ಜಾರಿ ಸಕ್ಕರೆ ಇಳುವರಿ,ತೊಕದಲಿ ಮೋಸ, ತಪ್ಪಿಸುವ ಬಗ್ಗೆ ಅಯಾ ಜಿಲ್ಲಾಧಿಕಾರಿಗಳ ಸಹಯೋಗದೊಂದಿಗೆ ಕಬ್ಬು ಅಭಿವೃದ್ಧಿ ಆಯು ಕ್ತರು ಸಭೆ ನಡೆಸಿ ಸಮಸ್ಯೆ ಬಗೆಹರಿಸಲು ಸಚಿವರು ಸೂಚನೆ ನೀಡಿದರು

ಸಕ್ಕರೆ ಕಬ್ಬು ಉದ್ದಿಮೆಯನ್ನು ಗಣಕೀಕರಣ ಮಾಡಲು ಸಭೆ ಒಪ್ಪಿತು, ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯ ಅಧ್ಯಕ್ಷರು ನಾಲ್ಕುತಿಂಗಳ ಹಿಂದೆ, ದ್ವಿಪಕ್ಷೀಯ ಒಪ್ಪಂದಪತ್ರ, ಹಣ ಪಾವತಿಗಳ. ಬಗ್ಗೆ ಗಣಕೀಕರಣ ಮಾಡಲು ಒತ್ತಾಯ ಮಾಡಿದರು ಕಬ್ಬು ಅಭಿವೃದ್ಧಿ ಆಯುಕ್ತ ಶಿವಾನಂದ ಕೆಲಕೇರಿ, ಹಾಗೂ ಮಂಡಳಿ ಸದಸ್ಯರು ಸಭೆಯಲ್ಲಿ ಭಾಗ ವಹಿಸಿದರು..


Google News

 

 

WhatsApp Group Join Now
Telegram Group Join Now
Suddi Sante Desk