ರಾಯಚೂರು –
ರಸ್ತೆ ಅಪಘಾತಕ್ಕೆ ವ್ಯಕ್ತಿಯೊರ್ವ ಸಾವಿಗೀಡಾದ ಘಟನೆ ರಾಯಚೂರಿನಲ್ಲಿ ನಡೆದಿದೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನೀರಮಾನ್ವಿಯಲ್ಲಿ ಈ ಒಂದು ಘಟನೆ ನಡೆದಿದೆ.
ನೀರಮಾನ್ವಿಯ ಶಿವಲಿಂಗ(47)ಮೃತ ದುರ್ಧೈವಿಯಾಗಿ ದ್ದಾರೆ. ಬೆಳಗ್ಗಿನ ವಾಯುವಿಹಾರಕ್ಕೆ ಹೋದಾಗ ಕಾರ್ ಡಿಕ್ಕಿಯಾಗಿ ಆ ಒಂದು ರಭಸಕ್ಕೆ ಸ್ಥಳದಲ್ಲೇ ಇವರು ಸಾವಿಗೀಡಾಗಿದ್ದಾರೆ.
ಅಪಘಾತದ ನಂತರ ಕಾರು ಸಮೇತ ಚಾಲಕ ಪರಾರಿ ಯಾಗಿದ್ದಾರೆ.ಈ ಕುರಿತಂತೆ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.