ಬಾಗಲಕೋಟೆ –
ಹಾವು ಕಚ್ಚಿ,ಚಿಕಿತ್ಸೆ ಫಲಿಸದೆ ಮಹಿಳೆಯೊಬ್ಬರು ಸಾವಿಗೀಡಾದ ಘಟನೆ ಬಾಗಲಕೋಟೆ ಯಲ್ಲಿ ನಡೆದಿದೆ.ಗೋನಾಳದ ಎಸ್ ಟಿ ಗ್ರಾಮದ ಹೊಲ ದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಹಾವು ಕಚ್ಚಿದೆ.
ಬಾಗಲಕೋಟೆ ಜಿಲ್ಲೆ ಇಲಕಲ್ ತಾಲ್ಲೂಕಿನ ಗೋನಾಳದ ಎಸ್ ಟಿ ಗ್ರಾಮ.ಸಂಗೀತಾ ಬಂಡಿವಡ್ಡರ್(೨೫) ಮೃತ ದುರ್ದೈವಿ ಯಾಗಿದ್ದು ಹೊಲದಲ್ಲಿ ಹತ್ತಿ ಬಿಡಿಸುವ ವೇಳೆ ಮಹಿಳೆಗೆ ಕಚ್ಚಿದೆ ಹಾವು.
ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ರೂ ಚಿಕಿತ್ಸೆ ಫಲಿಸದೇ ಮಹಿಳೆ ಸಾವಿಗೀಡಾಗಿದ್ದಾಳೆ.ಇಲಕಲ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಒಂದು ಕುರಿತು ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬಾಗಲಕೋಟೆ…..