ಬೆಂಗಳೂರು –
ಕಳೆದ ಹನ್ನೊಂದು ದಿನಗಳಿಂದ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಸಂಚಲನವನ್ನು ಉಂಟು ಮಾಡಿ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ ಸ್ಯಾಂಟ್ರೋ ರವಿ ಯನ್ನು ಕೊನೆಗೂ ಪೊಲೀಸರು ಬಂಧನ ಮಾಡಿ ದ್ದಾರೆ.ಹೌದು ಸತತ 11 ದಿನಗಳ ಬಳಿಕ ಸ್ಯಾಂಟ್ರೋ ರವಿಯನ್ನ ಬಂಧಿಸುವಲ್ಲಿ ಪೊಲೀ ಸರು ಸಕ್ಸಸ್ ಆಗಿದ್ದಾರೆ.
ಹೇಗಿದ್ದ ಸ್ಯಾಂಟ್ರೋ ರವಿ ಯಾಕೆ ಹೀಗಾದ. ಅವತ್ತಿನ ಫೋಟೋಗೂ ಇವತ್ತಿನ ಫೋಟೋಗೂ ವ್ಯತ್ಯಾಸ ಇರೋದೇಕೆ ಎಂಬ ಅನುಮಾನದ ಪ್ರಶ್ನೆ ಯೊಂದು ಪೊಲೀಸರಿಗೆ ಸಾರ್ವಜನಿಕರಿಗೆ ಕಾಡು ತ್ತಿದೆ.ಗುಜರಾತ್ಗೆ ಹೋದ ಸ್ಯಾಂಟ್ರೋ ರವಿ ಸಿಕ್ಕಿ ಬಿದ್ದಿದ್ದು ದೊಡ್ಡ ಪವಾಡವಾಗಿದ್ದು ಹೇಗೆ ಅನ್ನೋದೇ ಇಂಟ್ರೆಸ್ಟಿಂಗ್ ಆಗಿದೆ.
ವಿಗ್ ತೆಗೆದಿದ್ದ ಸ್ಯಾಂಟ್ರೋತಲೆ ತುಂಬಾ ಕೂದಲು, ಕೈಗೆ ಚೈನ್ ಮುರ್ನಾಲ್ಕು ಬೆರಳಿಗೆ ಪಳಪಳ ಹೊಳೆ ಯುವ ಉಂಗುರಗಳು.ಟೇಬಲ್ ಮುಂದೆ ಕಂತೆ, ಕಂತೆ ನೋಟು.ಇದು ಖಾಕಿ ಟೀಮ್ಗೆ ಬೇಕಾಗಿದ್ದ ಆರೋಪಿ ಸ್ಯಾಂಟ್ರೋ ರವಿಯ ಸುಳಿವಾಗಿತ್ತು.
ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿ, ಪೊಲೀಸಗೆ ಗೊತ್ತಾಗದಂತೆ ತಲೆಯಲ್ಲಿದ್ದ ವಿಗ್ ತೆಗೆದಿದ್ದಾನೆ.ಈ ಬಗ್ಗೆ ಪೊಲೀಸರಿಗೆ ಮೊದಲೇ ಅನುಮಾನವಿತ್ತಂತೆ.ಹೀಗಾಗಿ ಆತನ ತಲೆ ಕೂದಲು ಇಲ್ಲದ ಸ್ಕೆಚ್ ಸಹ ತನಿಖಾ ತಂಡ ರೆಡಿ ಮಾಡಿಕೊಂಡಿತ್ತು.
ಮೀಸೆ ಇಲ್ಲದ ಫೋಟೋ ಸಹ ತನಿಖೆಯ ವೇಳೆ ಕಳುಹಿಸಲಾಗಿತ್ತು. ಇದರಿಂದ ಆತನ ಬಂಧನ ಮಾಡಲು ಪೊಲೀಸರಿಗೆ ಸುಳಿವು ಸಿಕ್ಕಿದೆಸುಳಿವು ಕೊಟ್ಟಿದ್ದೇ ಸಿಂಗಲ್ ಪೊನ್ ಕಾಲ್ ಮಾಧ್ಯಮ ಗಳಲ್ಲಿ ಸುದ್ದಿಯಾಗ್ತಿದ್ದಂತೆ ಸ್ಯಾಂಟ್ರೋ ರವಿ ಕರ್ನಟಕದಿಂದಲೇ ಕಾಲ್ಕಿಳೋಕೆ ಆರಂಭಿಸಿ ದ್ದಾನೆ.ಮೈಸೂರಿನಿಂದ ಮಂಗಳೂರಿಗೆ, ಮಂಗಳೂರಿನಿಂದ ಪೂನಾಗೆ ಹೊರಟಿದ್ದ ಸ್ಯಾಂಟ್ರೋ ರವಿ
ಪೊಲೀಸರಿಗೆ ಸಿಕ್ಕಿಬೀಳುವಷ್ಟರಲ್ಲಿ ಎಸ್ಕೇಪ್ ಆಗಿದ್ದನು ಕೊನೆಗೆ ವಿಮಾನದಲ್ಲಿ ಗುಜರಾತ್ಗೆ ತೆರಳಿದ್ದ ಸ್ಯಾಂಟ್ರೋ ರವಿ ಬೇರೆ ಬೇರೆ ಸಿಮ್ ಖರೀದಿ ಮಾಡಿದ್ದನಂತೆ. ಇದೇ ಸಮಯಕ್ಕೆ ಸರಿಯಾಗಿ ಪೊಲೀಸರು ಸ್ಯಾಂಟ್ರೋ ರವಿ ಕ್ಲೋಸ್ ಪರ್ಸನ್ಗಳ ಬಗ್ಗೆ ಮಾಹಿತಿ ಸಂಗ್ರಹಿ ಸಿದ್ರು ಸ್ಯಾಂಟ್ರೋ ರವಿಗೆ ಪರಿಚಯವಿದ್ದ ಚೇತನ್ಗೆ ಬಂದ ಒಂದೇ ಒಂದು ಫೋನ್ ಕಾಲ್ ಮೂಲಕ ಪೊಲೀಸರಿಗೆ ಆರೋಪಿ ಗುಜರಾತ್ನ ಲ್ಲಿರುವ ಪಕ್ಕಾ ಮಾಹಿತಿ ಸಿಕ್ಕಿದ್ದು ಸಧ್ಯ ಅವನನ್ನು ಪೊಲೀಸರು ಬಂಧನ ಮಾಡಿ ವಶಕ್ಕೆ ತೆಗೆದು ಕೊಂಡು ಮುಂದಿನ ತನಿಖೆ ಯನ್ನು ಮಾಡತಾ ಇದ್ದಾರೆ.
ಸುದ್ದಿ ಸಂತೆ ನ್ಯೂಸ್ ಗುಜರಾತ್…..