ಧಾರವಾಡ –
ಹಾಡು ಹಗಲೇ ಧಾರವಾಡದಲ್ಲಿ ಮತ್ತೊಂದು ಚೈನ್ ಸ್ನ್ಯಾಚಿಂಗ್ ನಡೆದಿದೆ.ಹೌದು ನಗರದ ಸೈದಾಪೂರದ ಅಂಬಾ ಭವಾನಿ ದೇವಸ್ಥಾನದ ಬಳಿ ಈ ಒಂದು ಘಟನೆ ನಡೆದಿದೆ.ಕಳೆದ ವಾರವಷ್ಟೇ ನಗರದಲ್ಲಿ ಮೂರು ಕಡೆಗಳಲ್ಲಿ ನಡೆದಿದ್ದ ಚೈನ್ ಸ್ನ್ಯಾಚಿಂಗ್ ಪ್ರಕರಣಗಳು ಮಾಸುವ ಮುನ್ನವೇ ಇಂದು ಮತ್ತೊಂದು ಪ್ರಕರಣ ನಡೆದಿದೆ.ಆ ಪ್ರಕರಣಗಳು ಮಾಸುವ ಮುನ್ನವೇ ನಗರದಲ್ಲಿ ಮತ್ತೊಂ ದು ಕಳ್ಳತನ ನಡೆದಿದೆ.
ಹಾಡು ಹಗಲೇ ನಡೆದ ಘಟನೆಯಿಂದ ನಗರದ ಜನತೆ ಬೆಚ್ಚಿ ಬಿದ್ದಿದ್ದಾರೆ. ಸೈದಾಪೂರದ ಅಂಬಾ ಭವಾನಿ ಗುಡಿ ಬಳಿ ಘಟನೆ ನಡೆದಿದ್ದು ರಸ್ತೆಯಲ್ಲಿ ಹೊರಟಿದ್ದ ಮಹಿಳೆಯ ಕತ್ತಿನಲ್ಲಿನ ಮೂರುವರೆ ತೋಲೆ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ ದುಷ್ಕರ್ಮಿಗಳು.ಇನ್ನೂ ಸುದ್ದಿ ತಿಳಿದ ಉಪನಗರ ಪೊಲೀಸರು ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ಮಾಡತಾ ಇದ್ದಾರೆ.ಉಪನಗರ ಪೊಲೀಸರು ಈ ಕುರಿತಂತೆ ದೂರನ್ನು ದಾಖಲು ಮಾಡಿಕೊಂಡಿದ್ದು ಸ್ಥಳದ ಸುತ್ತ ಮುತ್ತಲು ಸಿಸಿ ಟಿವಿ ಗಳನ್ನು ಪರಿಶೀಲನೆ ಮಾಡತಾ ಇದ್ದಾರೆ.ಇನ್ನೂ ದಿನದಿಂದ ದಿನಕ್ಕೆ ನಗರದಲ್ಲಿ ಹೆಚ್ಚಾಗುತ್ತಿರುವ ಚೈನ್ ಸ್ನ್ಯಾಚಿಂಗ್ ಪ್ರಕರಣಗಳಿಂದ ಜನರು ಭಯಗೊಂಡಿದ್ದು ಡಿಸಿಪಿ ಯವರು ಕೂಡಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.