This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

ರಾಯಚೂರು

7ನೇ ವೇತನ ಆಯೋಗದ ಪರಿಷ್ಕ್ರರಣೆಗೆ ರಾಜ್ಯ ಸರ್ಕಾರಿ ನೌಕರರ ಪ್ರತಿಭಟನೆ – ಶೀಘ್ರದಲ್ಲೇ 7ನೇ ವೇತನ ಆಯೋಗ ಜಾರಿ ಮಾಡಿ,18 ತಿಂಗಳ ತುಟ್ಟಿ ಭತ್ಯೆ ನೀಡಿ ಒತ್ತಾಯ ಮಾಡಿ CM ಗೆ ಮನವಿ ಸಲ್ಲಿಸಿದ ನೌಕರರು…..

WhatsApp Group Join Now
Telegram Group Join Now

ರಾಯಚೂರು

7ನೇ ವೇತನ ಆಯೋಗದ ಪರಿಷ್ಕ್ರರಣೆಗೆ ರಾಜ್ಯ ಸರ್ಕಾರಿ ನೌಕರರ ಪ್ರತಿಭಟನೆ – ಶೀಘ್ರದಲ್ಲೇ 7ನೇ ವೇತನ ಆಯೋಗ ಜಾರಿ ಮಾಡಿ,18 ತಿಂಗಳ ತುಟ್ಟಿ ಭತ್ಯೆ ನೀಡಿ ಒತ್ತಾಯ ಮಾಡಿ CM ಗೆ ಮನವಿ ಸಲ್ಲಿಸಿದ ನೌಕರರು

ರಾಜ್ಯದ ಸಮಸ್ತ ಸರ್ಕಾರಿ ನೌಕರರ ಪರಿಷ್ಕರಣೆಗೆ ಈಗಾಗಲೇ ರಾಜ್ಯ ಸರ್ಕಾರ 7ನೇ ವೇತನ ಆಯೋಗವನ್ನು ರಚನೆ ಮಾಡಲಾಗಿದೆ.ಸಮಿತಿ ಕೂಡಾ ವರದಿಯನ್ನು ಸಿದ್ದಪಡಿಸಿ ಪೈನಲ್ ಟಚ್ ನೀಡುತ್ತಿದ್ದು ಇದರ ನಡುವೆ ಇತ್ತ ರಾಜ್ಯದಲ್ಲಿ ಏಳನೇ ವೇತನ ಆಯೋಗದ ಪರಿಷ್ಕರಣೆಗೆ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದಿಂದ ಪ್ರತಿಭಟನೆಯನ್ನು ಮಾಡಲಾಯಿತು.

ನಗರದಲ್ಲಿ ರಾಜ್ಯ ಸಮಿತಿಯ ವತಿಯಿಂದ ನೌಕರರು ಪ್ರತಿಭಟನೆಯನ್ನು ಮಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಪ್ರತಿಭ ಟನಾ ಮೆರವಣಿಗೆ ಆರಂಭಿಸಿ ನಗರಸಭೆ , ತಹಶೀಲ್ದಾರ್‌ ಕಚೇರಿ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.ಪಿ,ಎಫ್‌, ಆರ್‌ಡಿಎ ಕಾಯ್ದೆ, ಎನ್‌ಪಿಎಸ್ ಪದ್ಧತಿ, 7ನೇ ವೇತನ ಆಯೋಗ ಅನುಷ್ಠಾನ, ಖಾಲಿ ಹುದ್ದೆ ಭರ್ತಿ, ಹೊರಗುತ್ತಿಗೆ ನೌಕರರ ಕಾಯಂ, ರಾಜ್ಯ ಸರ್ಕಾ ವು ಕೋವಿಡ್ ಸಮಯದಲ್ಲಿ ಮುಟ್ಟುಗೋಲು ಹಾಕಿಕೊಂಡಿರುವ 18 ತಿಂಗಳ ತುಟ್ಟಿ ಭತ್ಯೆ ಕೊಡಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಸಾರ್ವಜನಿಕ ಉದ್ದಿಮೆಗಳು ಖಾಸಗೀಕರಣ ನಿಲ್ಲಿಸಬೇಕು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಗೊಳಿಸಬೇಕು ಕೇಂದ್ರ,ಹಾಗೂ ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ 60 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.ಈ ಒಂದು ಪ್ರತಿಭಟನೆಯಲ್ಲಿ ರಾಜ್ಯ ಸಮಿತಿಯ ಅದ್ಯಕ್ಷ ಹೆಚ್.ಎಸ್. ಜೈಕುಮಾರ,ಕಾರ್ಯಾಧ್ಯಕ್ಷೆ ಶೋಭಾ ಲೋಕ ನಾಗಣ್ಣ, ಅಮರೇಶಪ್ಪ, ನಾರಾಯಣಪ್ಪ,ಜಿಲ್ಲಾ ಘಟಕದ ಅಧ್ಯಕ್ಷ ತಾಯರಾಜ್ ,ಮೊಹಿನುದ್ದಿನ್, ಗುರುನಾಥ, ರಮೇಶ್ ಗೌಳಿ, ಸುಧಾಕರ, ಮಹದೇ ವಪ್ಪ, ಮಧುಕಾಂತ, ವೆಂಕಟೇಶ, ರಾಘವೇಂದ್ರ, ಹೃಷಿಕೇಶ, ನಾಗರಾಜ್, ಸತ್ಯ ನಾರಾಯಣ ಸೇರಿದಂತೆ ಹಲವು ನೌಕರರು ಸಂಘಟನೆಯ ಮುಖಂಡರು ಪಾಲ್ಗೊಂಡಿದ್ದರು.

ಸುದ್ದಿ ಸಂತೆ ನ್ಯೂಸ್ ರಾಯಚೂರು…..


Google News

 

 

WhatsApp Group Join Now
Telegram Group Join Now
Suddi Sante Desk