ಬೆಂಗಳೂರು –
ಕೇಂದ್ರ ಸರ್ಕಾರ ತಮ್ಮ ನೌಕರರಿಗೆ ಶೇ 3 ರಷ್ಟು ತುಟ್ಟಿಭತ್ಯೆ ಯನ್ನು ಮಂಜೂರು ಮಾಡಿ ಆದೇಶವನ್ನು ಮಾಡಿದೆ.ಪ್ರತಿ ವರ್ಷ ಮಂಜೂರು ಮಾಡಿದ ದಿನದಂದೇ ಇದನ್ನು ನೀಡು ವುದು ಸಂಪ್ರದಾಯವಾಗಿರುತ್ತದೆ. ಹೀಗಿರುವಾಗ ಕೇಂದ್ರ ಸರ್ಕಾರ ಈಗಾಗಲೇ ತಮ್ಮೇಲ್ಲ ನೌಕರರಿಗೆ ಹಬ್ಬದ ಮುಂಚಿ ತವಾಗಿಯೇ ನೀಡಿ ಘೋಷಣೆಯನ್ನು ಮಾಡಿದೆ.
ಹೀಗಾಗಿ ಕರ್ನಾಟಕ ಸರ್ಕಾರವು ಕೂಡಾ ರಾಜ್ಯ ಸರ್ಕಾರಿ ನೌಕರರಿಗೆ 1-7-2021 ರಿಂದ ಪೂರ್ವಾನ್ವಯವಾಗುವಂತೆ ಕೇಂದ್ರ ಸರ್ಕಾರದಂತೆ ತುಟ್ಟಿಭತ್ಯೆಯನ್ನು ಸಂಪೂರ್ಣ ನಗದು ರೂಪದಲ್ಲಿ ನೀಡಿ ಆದೇಶ ಹೊರಡಿಸಬೇಕು ಹಾಗೇ ಆರ್ಥಿಕ ಇಲಾಖೆಗೆ ನಿರ್ದೇಶನವನ್ನು ನೀಡುವಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ಪರವಾಗಿ ರಾಜ್ಯಾಧ್ಯಕ್ಷರಾದ ಷಡಾಕ್ಷರಿ ಅವರು ಆಗ್ರಹವನ್ನು ಮಾಡಿದ್ದಾರೆ