ಬೆಂಗಳೂರು –
ಕಡ್ಡಾಯ ವರ್ಗಾವಣೆಗೊಂಡ ನಗರ ಶಿಕ್ಷಕರನ್ನು ಮತ್ತೆ ಅವರ ಸ್ವಂತ ಜಿಲ್ಲೆಗೆ ಸ್ವಂತ ತಾಲ್ಲೂಕಿನ ಸುಗ್ರವಾಜ್ಞೆ ಹೊರಡಿಸಿ ವರ್ಗಾವಣೆ ಮಾಡುತ್ತಿರುವ ಹಾಗೆ ಹತ್ತು ಹದಿನೈದು ಇಪ್ಪತ್ತು ವರ್ಷಗಳಿಂದ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೂ ಸಹ ಈ ಕಾಯಿದೆಯನ್ನು ಜಾರಿಗೊಳಿಸಿ ಒಮ್ಮೆ ಸ್ವಂತ ಜಿಲ್ಲೆಗೆ ಅಥವಾ ಒಮ್ಮೆ ಸ್ವಂತ ತಾಲ್ಲೂಕಿಗೆ ವರ್ಗಾವಣೆ ಮಾಡಲು ಸುಗ್ರೀವಾಜ್ಞೆ ಹೊರಡಿಸಿ ವರ್ಗಾವಣೆ ಮಾಡಬೇಕೆಂದು ಗ್ರಾಮೀಣ ಪ್ರೌಢಶಾಲಾ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷ ಪವಾಡೆಪ್ಪ ಆಗ್ರಹಿಸಿದ್ದಾರೆ
ಹಲವಾರು ವರ್ಷಗಳಿಂದ ಶಿಕ್ಷಕರ ವರ್ಗಾವಣೆಗೆ ಇಲ್ಲದೆ ಮಾನಸಿಕವಾಗಿ ದೈಹಿಕವಾಗಿ ಕಂಗಾಲಾಗಿದ್ದಾರೆ ಕೇವಲ ಪತ್ರಿಕೆ ಹೇಳಿಕೆಗಳು ಬರುತ್ತವೆ ಆದರೆ ಕಾರ್ಯರೂಪಕ್ಕೆ ಬರುವುದು ವಿಳಂಬವಾಗುತ್ತಿದ್ದು ಅದಕ್ಕಾಗಿ ಹಂತ ಹಂತ ವಾಗಿ ಅವರ ಸ್ವಂತ ಜಿಲ್ಲೆಗೆ ಸ್ವಂತ ತಾಲ್ಲೂಕಿಗೆ ವರ್ಗಾವಣೆ ಮಾಡಬೇಕು ಖಾಲಿ ಇರುವ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಬೇಕೆಂದು ಒತ್ತಾಯವನ್ನು ಮಾಡಿದರು
ಇದರ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಶಿಕ್ಷಣ ಸಚಿವರು ಶಿಕ್ಷಕರ ಸಮಸ್ಯೆಗೆ ಸ್ಪಂದಿಸಿ ತಕ್ಷಣ ಸುಗ್ರವಾಜ್ಞೆ ಹೊರಡಿಸಿ ವರ್ಗಾವಣೆ ಮಾಡಬೇಕೆಂದು ಆಗ್ರಹ ಪಡಿಸಿದ್ದಾರೆ.