ರಾಜ್ಯಧ್ಯಕ್ಷರೇ 7ನೇ ವೇತನ ಆಯೋಗದ ವಿಚಾರದಲ್ಲಿ ಮುಂದಿನ ನಡೆ ಏನು -ಇನ್ನೂ ಎಷ್ಟು ದಿನ ಕಾಯಬೇಕು ರಾಜ್ಯದ ಸಮಸ್ತ ಸರ್ಕಾರಿ ನೌಕರರಿಗೆ ತಿಳಿಸಿ ರಾಜ್ಯ ಸರ್ಕಾರಿ ನೌಕರರ ಒತ್ತಾಯವನ್ನು ಹೌದು ರಾಜ್ಯದ ಸರ್ಕಾರಿ ನೌಕರರಿಗೆ ವೇತನ ಪರಿಷ್ಕ್ರರಣೆ ವಿಚಾರ ಕುರಿತಂತೆ ಈಗಾಗಲೇ ಈಗಾಗಲೇ ರಾಜ್ಯ ಸರ್ಕಾರವು 7ನೇ ವೇತನ ಆಯೋಗವನ್ನು ರಚನೆ ಮಾಡಲಾಗಿದೆ.
ಈ ಒಂದು ಆಯೋಗವು ಈಗಾಗಲೇ ಎಲ್ಲಾ ವರದಿಯನ್ನು ಸಿದ್ದತೆ ಮಾಡಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯನ್ನು ಮಾಡಲು ಕೂಡಾ ಸಿದ್ದವಾಗಿತ್ತು ಈ ನಡುವೆ ಆಯೋಗದ ಸಮಯಾಕಾಶವನ್ನು ಈ ಹಿಂದೆ 6 ತಿಂಗಳು ಕಾಲ ವಿಸ್ತರಣೆಯನ್ನು ಮಾಡಿದ ಬೆನ್ನಲ್ಲೇ ಸಧ್ಯ ಈ ಒಂದು ನವಂಬರ್ 18 ಕ್ಕೆ 7ನೇ ವೇತನ ಆಯೋಗದ ಅವಧಿ ಕೂಡಾ ಮುಕ್ತಾಯವಾಗಲಿದ್ದು ವರದಿ ಕೂಡಾ ಸಿದ್ದವಾ ಗಿತ್ತು
ಇನ್ನೇನು ವರದಿ ಸಲ್ಲಿಕೆಯಾಗಿ ದೀಪಾವಳಿಗೆ ಎಲ್ಲರ ಹಾಗೆ ನಮಗೂ ಕೂಡಾ 7ನೇ ವೇತನ ಆಯೋಗವು ಜಾರಿಯಾಗಿ ಹೊಸ ವೇತನ ಸಿಗುತ್ತದೆ ಎಂದುಕೊಂಡಿದ್ದ ರಾಜ್ಯದ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಮತ್ತೆ ಶಾಕ್ ನೀಡಿದ್ದು ಆಯೋಗದ ಅವಧಿಯನ್ನು ಮತ್ತೆ 6 ತಿಂಗಳುಗಳ ಕಾಲ ಅವಧಿಯನ್ನು ವಿಸ್ತರಣೆ ಮಾಡಿದ್ದು ಅತ್ತ ಆಯೋಗದ ಅವಧಿ ವಿಸ್ತರಣೆಯಾಗುತ್ತಿದ್ದಂತೆ ಇತ್ತ ಈ ಒಂದು ವಿಚಾರವನ್ನು ತಿಳಿದ ರಾಜ್ಯದ ಸರ್ಕಾರಿ ನೌಕರರು ರಾಜ್ಯ ಸರ್ಕಾರದ ನಡೆಯ ವಿರುದ್ದ ಅಸಮಧಾನವನ್ನು ವ್ಯಕ್ತಪಡಿಸಿದ್ದು ಇದರೊಂದಿಗೆ ಈ ಒಂದು ವಿಚಾರದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಯವರ ವಿರುದ್ದ ಕೂಡಾ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಮಾನ್ಯ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರೇ ಒಂದು ವಿನಂತಿ 7ನೇ ವೇತನ ಆಯೋಗ ರಚನೆ ಸಂಬಂಧ ಇನ್ನು ಎಷ್ಟು ದಿನಗಳ ಕಾಲ ಕಾಯಬೇಕು ಮತ್ತೆ ಮತ್ತೆ ಮುಂದೂಡಿಕೆ ಮಾಡುತ್ತಿರುವುದು ಇದು ತಮ್ಮ ಗಮನಕ್ಕೆ ಬಂದಿದೆ ಎಂದು ಭಾವಿಸಿದ್ದೇವೆ ಮುಂದಿನ ತಮ್ಮ ನಡೆ ಏನೆಂದು ರಾಜ್ಯದ ಎಲ್ಲಾ ಸರ್ಕಾರಿ ನೌಕರ ರಿಗೆ ತಿಳಿಸಿ ಎಂಬ ಸಂದೇಶವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಾಕಿ ಆಕ್ರೋಶದೊಂದಿಗೆ ಅಸಮಧಾನವನ್ನು ವ್ಯಕ್ತಪಡಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..