ಬೀದರ್ –
ಲೋಕಾಯುಕ್ತ ಬಲೆಗೆ ಬಿದ್ದ ಸರ್ವೆಯರ್ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಭ್ರಷ್ಟ ಸರ್ವೆಯರ್ ಸಿದ್ದಾರ್ಥ ನನ್ನು ಲೋಕಾಯುಕ್ತ ಬಲೆಗೆ ಹಾಕಿಸಿದ ರೈತ.ಕೃಷಿ ಭೂಮಿಯನ್ನು ಫೋಡಿ ಮಾಡಿಕೊ ಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಭ್ರಷ್ಟ ಸರ್ವೆಯರ್ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಬೀದರ್ ನಲ್ಲಿ ನಡೆದಿದೆ.
ರೈತನೇ ಭ್ರಷ್ಟ ಸರ್ವೆಯರ್ ನ್ನು ಲೋಕಾಯಕ್ತರ ಖೆಡ್ಡಾಗೆ ಹಾಕಿದ್ದಾರೆ. ಹಿಪ್ಪಳಗಾಂವ್ ಗ್ರಾಮದ ರೈತ ವೆಂಕಟರಾವ್ ಎಂಬುವರ ಭೂಮಿ ನಾಲ್ವರು ಮಕ್ಕಳಿಗೆ ಫೋಡಿ ಮಾಡಿಕೊಡಲು ಅರ್ಜಿ ಹಾಕ ಲಾಗಿತ್ತು, ಸರ್ಕಾರ ಫೀಸ್ ಕಟ್ಟಿದರೂ ಪ್ರತ್ಯೇಕ ವಾಗಿ 10 ಸಾವಿರ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದ ಸರ್ವೆಯರ್ ಸಿದ್ದಾರ್ಥನ ವಿರುದ್ಧ ರೈತ ವೆಂಕಟರಾವ್ ಲೋಕಾಯಕ್ತರಿಗೆ ದೂರು ನೀಡಿದ್ದರು
ಪ್ರಕರಣವನ್ನ ಗಂಭೀರವಾಗಿ ತಗೆದುಕೊಂಡ ಲೋಕಾ ಅಧಿಕಾರಿಗಳು ಕಾರ್ಯಾಚರಣೆ ಮಾಡಿ ಸರ್ವೆಯರ್ ನನ್ನು ಟ್ರ್ಯಾಪ್ ಮಾಡಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಸರ್ವೆಯರ್ ಸಿದ್ದಾರ್ಥ ಲಂಚ ಪಡೆಯುತ್ತಿದ್ದ ಸಮಯದಲ್ಲಿ ಬಲೆ ಬಿಸಿ ದಾಳಿ ನಡೆಸಿದ್ದಾರೆ 6 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಡಿವೈಎಸ್ಪಿ ಎನ್.ಎಮ್.ಓಲೆಕಾರ್ ಮತ್ತು ತಂಡ ದಾಳಿ ನಡೆಸಿ ಸರ್ವೆಯರ್ ಸಿದ್ದಾರ್ಥಗೆ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ,
ಇನ್ನು ಇದೇ ವೇಳೆ ಮಾತನಾಡಿದ ರೈತ ವೆಂಕಟ ರಾವ್ ಬೀದರ್ ತಹಶಿಲ್ದಾರ ಕಚೇರಿ ಅಂದ್ರೆ ಲೂಟಿ ಹೊಡೆಯೊ ಕಚೇರಿಯಂತಾಗಿದೆ ಇಲ್ಲಿಗೆ ಯಾವುದೇ ಕೆಲಸ ಆಗಬೇಕೆಂದರೂ ಲಂಚ ಕೊಡಲೇಬೇಕಾದಂತ ಪರಿಸ್ಥಿತಿ ನಿರ್ಮಾಣಗೊಂ ಡಿದೆ ಅವರು ಇವರು ಅಂತಲ್ಲ ಎಲ್ಲಾ ಅಧಿಕಾರಿ ಗಳು ಇದರಲ್ಲಿ ಶಾಮೀಲಾಗಿದಾರೆ ರೈತರು ಅಂತ ನೋಡದೇ ಅಧಿಕಾರಿಗಳು ಲಂಚ ಪಡೆಯುತ್ತಿದ್ದಾ ರೆಂದು ನೋವನ್ನು ತೋಡಿಕೊಂಡರು.
ಸುದ್ದಿ ಸಂತೆ ನ್ಯೂಸ್ ಬೀದರ್…..