ಕೊಪ್ಪಳ –
ರಾಜ್ಯದಲ್ಲಿ ಮತ್ತೊರ್ವ ಆದರ್ಶ ಉತ್ಸಾಹಿ ಶಿಕ್ಷಕರೊಬ್ಬರು ನಿಧನರಾಗಿದ್ದಾರೆ.ಹೌದು ಕೊಪ್ಪಳ ಜಿಲ್ಲೆಯ ತುಗ್ಗಲಡೋ ಣಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕರಾದ ಶರಣಪ್ಪ ಮಲ್ಲಾಪೂರ ಅವರೇ ನಿಧನರಾದ ಶಿಕ್ಷಕರಾಗಿದ್ದಾರೆ. ಕಳೆದ ಹಲವಾರು ದಿನಗಳಿಂದ ಇಲಾಖೆ ಯಲ್ಲಿ ಅದರಲ್ಲೂ ದೈಹಿಕ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹೆಸರನ್ನು ಮಾಡಿ ಮಾದರಿಯಾಗಿದ್ದ ಶರಣಪ್ಪ ಅವರು ಅಕಾಲಿಕವಾಗಿ ನಿಧನರಾಗಿದ್ದಾರೆ.
ಇವರ ಅಗಲಿಕೆಯಿಂದಾಗಿ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ತುಂಬಲಾರದ ನಷ್ಟವಾಗಿದ್ದು ಅಗಲಿಕೆಗೆ ಕೊಪ್ಪಳ ಜಿಲ್ಲೆಯ ಸಮಸ್ತ ಗುರು ಬಳಗದವರು ಭಾವ ಪೂರ್ಣ ನಮನ ಸಲ್ಲಿಸಿ ಸಂತಾಪವನ್ನು ಸೂಚಿಸಿದ್ದಾರೆ ಅಲ್ಲದೇ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕರ ಸಂತಾಪ ವನ್ನು ಸೂಚಿಸಿದ್ದು ನಮನವನ್ನು ಸಲ್ಲಿಸಿದ್ದಾರೆ.ಇನ್ನೂ ಮೃತರ ಅಂತ್ಯಕ್ರಿಯೆ ಸ್ವಗ್ರಾಮ ರಂಗಾಪೂರದಲ್ಲಿ ನೆರೆವೇರಿತು