ಬೆಳಗಾವಿ –
ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಮರಾಠಿ ಶಾಲೆಯ ದೈಹಿಕ ಶಿಕ್ಷಕರಾದ ಸುರೇಶ ಭೀಮಪ್ಪ ಸುಣಗಾರ ಹೃದಯಾಘಾತ ದಿಂದ ನಿಧನರಾಗಿದ್ದಾರೆ.ಹೌದು ತಾಲೂಕಿನ ಹಿರೇಬಾಗೇವಾಡಿ ಗ್ರಾಮದ ನಿವಾಸಿಯಾಗಿದ್ದ ಇವರು ರಜೆ ಹಿನ್ನಲೆ ಯಲ್ಲಿ ಮನೆಯಲ್ಲಿದ್ದರು ಹೃದಯಾಘಾತ ಕಾಣಿಸಿಕೊಂಡ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು ಆದರೆ ಚಿಕಿತ್ಸೆ ಫಲಸದೇ ನಿಧನರಾದರು
ಮಧ್ಯಾಹ್ನ ಇವರ ಅಂತ್ಯಕ್ರಿಯೆ ನೆರವೇರಿತು ಇನ್ನೂ ಸುರೇಶ ಸುಣಗಾರರು ಸೌಮ್ಯ ಸ್ವಭಾವದ ಮಿತಭಾಷಿ ಯಾಗಿದ್ದರು ಮೃತರು ಪತ್ನಿ ಮಕ್ಕಳು ಸೇರಿದಂತೆ ಅಪಾರ ಬಂಧು ಬಾಂಧವರನ್ನು ಅಗಲಿದ್ದಾರೆ.ಮೃತ ಶಿಕ್ಷಕ ಸುರೇಶ ಸುಣಗಾರ ರರ ಅಕಾಲಿಕ ನಿಧನಕ್ಕೆ ತಾಲೂಕಿನ ಶಿಕ್ಷಕರು ಹಿಂಡಲಗಾ ಶಾಲೆಗಳ ಶಿಕ್ಷಕರರು ವಿದ್ಯಾರ್ಥಿಗಳು, ಗ್ರಾಮ ಸ್ಥರು,ಸಂಘ ಸಂಸ್ಥೆ ಪದಾಧಿಕಾರಿಗಳು ಹಾಗೂ ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ ಸುಣಗಾರ ಹಾಗೆ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕ ಬಂಧುಗಳು ಅತೀವ ಶೋಕ ವ್ಯಕ್ತಪಡಿಸಿದ್ದು ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಪ್ರಾರ್ಥಿಸಿದ್ದಾರೆ.