ವಿಜಯಪುರ –
ರಾಜ್ಯದಲ್ಲಿ ಮತ್ತೊರ್ವ ಹಿರಿಯ ಶಿಕ್ಷಕರೊಬ್ಬರು ಹೃದಯಾ ಘಾತದಿಂದ ನಿಧನರಾಗಿದ್ದಾರೆ.ಹೌದು ಶಾಲೆಗೆ ರಜೆ ಇದೆ ಎಂದುಕೊಂಡು ಮನೆಯಲ್ಲಿ ಕುಟುಂಬದವರೊಂದಿಗೆ ಇದ್ದ ಶಿಕ್ಷಕ ವಿಜಯಕುಮಾರ ಮಲ್ಲಪ್ಪ ಮೇತ್ರಿ ನಿಧನರಾದ ಶಿಕ್ಷಕರಾಗಿದ್ದಾರೆ.ಹಿರಿಯ ಪ್ರಾಥಮಿಕ ಶಾಲೆ ಗುಂಡುನ ತಾಂಡಾ ತಡವಲಗ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಯನ್ನು ಸಲ್ಲಿಸುತ್ತಿದ್ದ ಇವರು ಶಾಲೆಯಲ್ಲಿ ಮತ್ತು ಇಲಾಖೆ ಯಲ್ಲಿ ತುಂಬಾ ಉತ್ಸಾಹಿ ಆದರ್ಶ ಮಾದರಿಯಾಗಿದ್ದು ಅಲ್ಲದೇ ತುಂಬಾ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದ ಇವರ ನಿಧನದಿಂದಾಗಿ ಇಲಾಖೆಗೆ ತುಂಬಲಾರದ ನಷ್ಟವಾಗಿದೆ.
ಇನ್ನೂ ನಿಧನಕ್ಕೆ ಶಾಲೆಯ ಮತ್ತು ಜಿಲ್ಲೆಯ ಮತ್ತು ರಾಜ್ಯದ ಮೂಲೆ ಮೂಲೆಗಳಿಂದ ಶಿಕ್ಷಕರು ಭಾವಪೂರ್ಣ ನಮನ ವನ್ನು ಸಲ್ಲಿಸಿ ಸಂತಾಪವನ್ನು ಸೂಚಿಸಿದ್ದಾರೆ.ಇನ್ನೂ ಇವರ ಅಂತ್ಯಕ್ರಿಯೆ ಸ್ವಗ್ರಾಮವಾದ ಬೆನಕನಹಳ್ಳಿಯಲ್ಲಿ ನಿನ್ನೆ ನೆರೆವೆರಿತು.