ಬೆಂಗಳೂರು –
ಶಿಕ್ಷಕರ ವರ್ಗಾವಣೆ ಸೇರಿದಂತೆ ಹಲವು ಸಮಸ್ಯೆಗಳ ಕುರಿತಂತೆ ಈವರೆಗೆ ಸೂಕ್ತವಾದ ಪರಿಹಾರ ಸಿಗದ ಹಿನ್ನಲೆ ಯಲ್ಲಿ ಕಾದು ಕಾದು ಬೇಸತ್ತ ನಾಡಿನ ಶಿಕ್ಷಕರು ಕೊನೆಗೂ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಹೌದು ಶಿಕ್ಷಕರ ವರ್ಗಾವಣೆ ಸೇರಿದಂತೆ ಸಧ್ಯ ರಾಜ್ಯದಲ್ಲಿ ಶಿಕ್ಷಕರು ಸಾಕಷ್ಟು ಪ್ರಮಾಣದಲ್ಲಿ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಈವರೆಗೆ ಇವರ ಧ್ವನಿಯಾಗಿರುವ ಶಿಕ್ಷಕರ ಸಂಘಟನೆಗಳು ಶಾಶ್ವತವಾದ ಪರಿಹಾರವನ್ನು ಮಾಡುತ್ತಾರೆಂದುಕೊಂಡು ಕಾದು ಕಾದು ಬೇಸತ್ತ ಶಿಕ್ಷಕರು ಈಗ ತಮ್ಮ ಸಮಸ್ಯೆಗಳನ್ನು ತಾವೇ ಪರಿಹಾರ ಮಾಡಿಕೊಳ್ಳಲು ಸಿದ್ದತೆ ಮಾಡಿಕೊಳ್ಳುತ್ತಿ ದ್ದಾರೆ.
ಈ ಕುರಿತಂತೆ ಈಗಾಗಲೇ ಸಾಕಷ್ಟು ವೇಬಿನಾರ್ ಗಳನ್ನು ಮಾಡಿಕೊಂಡಿರುವ ವರ್ಗಾವಣೆಯ ವಂಚಿತರು ಶಿಕ್ಷಕರು ಸಧ್ಯ ಹೋರಾಟಕ್ಕೆ ವೇದಿಕೆಯನ್ನು ಮಾಡಿಕೊಳ್ಳುತ್ದಿದ್ದು ಬಲವಾದ ಗಟ್ಟಿಯಾದ ನಿರ್ಧಾರಕ್ಕೆ ಬಂದಿದ್ದಾರೆ. ಅವರು ಇವರನ್ನು ಕಾದು ಕಾದು ನೋಡಿ ನೋಡಿ ಬೇಸತ್ತು ಯಾರಿಂದಲೂ ಯಾವ ಸಮಸ್ಯೆಗಳು ಪರಿಹಾರವಾಗದ ಸಿಗದ ಹಿನ್ನಲೆಯಲ್ಲಿ ಶೀಘ್ರದಲ್ಲೇ ಶಿಕ್ಷಣ ಸಚಿವರ ಮನೆಗೆ ಮುತ್ತಿಗೆ ಹಾಕಲು ತಿರ್ಮಾನವನ್ನು ಕೈಗೊಂಡಿದ್ದು ಇನ್ನಾದರೂ ಶಿಕ್ಷಕರು ನಿಮ್ಮ ಮನೆಗೆ ಬರುವ ಮುನ್ನವೇ ದಯಮಾಡಿ ಶಿಕ್ಷಣ ಸಚಿವರೇ ಎಚ್ಚೇತ್ತುಕೊಂಡು ಈ ಕೂಡಲೇ ಶಿಕ್ಷಕರ ಸಮಸ್ಯೆಗಳನ್ನು ಪರಿಹಾರ ಮಾಡಿ ಯಾರಿಗೂ ಯಾವ ಇಲಾಖೆಗೂ ಇಲ್ಲದ ಅವೈಜ್ಞಾನಿಕ ವರ್ಗಾವಣೆಯ ನೀತಿ ನಿಯಮಗಳಿಂದ ಬೇಸತ್ತಿರುವ ಶಿಕ್ಷಕರಿಗೆ ಶಾಶ್ವತವಾದ ಪರಿಹಾರವನ್ನು ಕಲ್ಪಿಸಿ ಒಮ್ಮೆಯಾ ದರೂ ಅವರಿಗೆ ವರ್ಗಾವಣೆ ನೀಡಿ ನೆಮ್ಮದಿಯ ಬದುಕಿಗೆ ಅವಕಾಶ ಕಲ್ಪಿಸಿಕೊಡುತ್ತೀರಾ ಎಂದು ನಾಡಿನ ಶಿಕ್ಷಕರು ಭರವಸೆಯನ್ನು ಇಟ್ಟುಕೊಂಡಿದ್ದಾರೆ.