ಚಿಕ್ಕಮಗಳೂರು –
ಹುಲಿ ಉಗುರು ಧರಿಸಿದ್ದ ಇಬ್ಬರ ಬಂಧನ – ರಾಜ್ಯದಲ್ಲಿ ಸದ್ದು ಮಾಡುತ್ತಿದೆ ಹುಲಿ ಉಗುರು ಪ್ರಕರಣಗಳು.ಹೌದು ಹುಲಿ ಉಗುರು ಡಾಲರ್ ಧರಿಸಿದ್ದ ಇಬ್ಬರು ಅರ್ಚಕರನ್ನು ಬಂಧನ ಮಾಡ ಲಾಗಿದೆ.ಹೌದು ಚಿಕ್ಕಮಂಗಳೂರಿನಲ್ಲಿ ಕಾರ್ಯಾ ಚರಣೆಯನ್ನು ಮಾಡಿ ಇಬ್ಬರು ಅರ್ಚಕರನ್ನು ವಶಕ್ಕೆ ತಗೆದುಕೊಂಡಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ನ್ಯಾಯಾಲಯಕ್ಕೆ ಅರ್ಚಕರನ್ನು ಹಾಜರು ಪಡಿಸಲಾಗಿದೆ.
ಬಾಳೆಹೊನ್ನೂರು ಅರಣ್ಯ ಅಧಿಕಾರಿಗಳ ಸಮ್ಮು ಖದಲ್ಲಿ ಹಾಜರು ಮಾಡಲಾಗಿದೆ.ಚಿಕ್ಕಮಗಳೂರು ಜೆ.ಎಂ.ಎಫ್.ಸಿ. ನ್ಯಾಯಾಲಯಕ್ಕೆ ಅರ್ಚಕರು ಹಾಜರಾಗಿದ್ದು ಖಾಂಡ್ಯ ಮಾರ್ಕಂಡೇಶ್ವರ ದೇವಾ ಲಯದ ಇಬ್ಬರು ಅರ್ಚಕರಾಗಿದ್ದು ಕೃಷ್ಣಾನಂದ ಹೊಳ್ಳ, ನಾಗೇಂದ್ರ ಜೋಯಿಸ್ ಬಂಧಿತರಾಗಿದ್ದು ಬಂಧಿತರಿಂದ ಮೂರು ಹುಲಿ ಉಗುರನ್ನು ವಶಕ್ಕೆ ಪಡೆಯಲಾಗಿದ್ದು
ಬಾಳೆಹೊನ್ನೂರು ವಲಯ ಅರಣ್ಯ ಅಧಿಕಾರಿಗ ಳಿಂದ ಈ ಒಂದು ಕಾರ್ಯಾಚರಣೆ ನಡೆದಿದೆ. ಬಾಳೆಹೊನ್ನೂರು ಅರಣ್ಯ ಇಲಾಖೆಯಿಂದ ಪ್ರಕರಣ ದಾಖಲಾಗಿದ್ದು ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ದೇವಾಲಯದ ಅರ್ಚಕರಾ ಗಿರುವ ಇವರನ್ನು ಸಧ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು ಇತ್ತ ಅಧಿಕಾರಿಗಳು ತನಿಖೆ ಯನ್ನು ಕೈಗೊಂಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಚಿಕ್ಕಮಗಳೂರು…..