ಬೆಂಗಳೂರು –
ಬೆಂಗಳೂರಿನಲ್ಲಿ ಕಳೆದ ನಾಲ್ಕು ದಿನಗಳಿಂದ NPS ನೌಕರರ ಪ್ರತಿಭಟನೆ ಮಾಡುತ್ತಿದ್ದಾರೆ.ನಗರದ ಪ್ರೀಡಂ ಪಾರ್ಕ್ ನಲ್ಲಿ ಈ ಒಂದು ಮಾಡು ಇಲ್ಲವೇ ಮಡಿ ಹೋರಾಟ ನಡೆಯುತ್ತಿದೆ.ರಾಜ್ಯದ ಮೂಲೆ ಮೂಲೆಗಳಿಂದ ಈ ಒಂದು ಬೃಹತ್ ಪ್ರತಿಭಟನೆ ಯಲ್ಲಿ ನೌಕರರು ಪಾಲ್ಗೊಂಡು ಹಳೆ ಪಿಂಚಣಿಗಾಗಿ ಹಗಲು ರಾತ್ರಿ ಎನ್ನದೇ ಸ್ಥಳದಲ್ಲಿಯೇ ಕುಳಿತು ಕೊಂಡು ಹೋರಾಟವನ್ನು ಮಾಡುತ್ತಿದ್ದಾರೆ
ಇನ್ನೂ ನಾಲ್ಕು ದಿನಗಳಿಂದ ಹೋರಾಟ ನಡೆ ಯುತ್ತಿದ್ದರೂ ಕೂಡಾ ಈವರೆಗೆ ಹೋರಾಟಕ್ಕೆ ರಾಜ್ಯದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಬೆಂಬಲವನ್ನು ನೀಡದೆ ಪ್ರತಿಭ ಟನಾ ಸ್ಥಳಕ್ಕೆ ಹೋಗಿಲ್ಲ ಈ ಒಂದು ವಿಚಾರ ಕುರಿತಂತೆ ನೌಕರರ ಕುರಿತಂತೆ ರಾಜ್ಯಾಧ್ಯಕ್ಷರು ತುಂಬಾ ಹಗುರವಾಗಿ ಮಾತನಾಡಿದ್ದಾರೆಂಬ ಆರೋಪ ಕೇಳಿ ಬಂದಿದ್ದು ಹೀಗಾಗಿ ಇದೇಲ್ಲವನ್ನು ಗಮನಿಸಿಕೊಂಡು ರಾಜ್ಯದ ಸರ್ಕಾರಿ ನೌಕರರೊ ಬ್ಬರು ಷಡಾಕ್ಷರಿ ಅವರೊಂದಿಗೆ ಪೊನ್ ನಲ್ಲಿ ಮಾತನಾಡಿದ್ದಾರೆ
ಮೊದ ಮೊದಲು ಯಾಕೇ ಹೀಗೆ ಮಾತನಾಡಿ ದ್ದೀರಾ ಸರ್ ಎನ್ನುತ್ತಾ ತುಂಬಾ ಸಹನೆಯಿಂದ ಮಾತನಾಡುತ್ತಾ ಆ ಮೇಲೆ ರಾಜ್ಯಾಧ್ಯಕ್ಷರನ್ನೇದೆ ಹೋರಾಟ ಸಂಘಟನೆ ಬಗ್ಗೆ ತುಂಬಾ ಹಗುರವಾಗಿ ಮಾತನಾಡಿದ ಷಡಾಕ್ಷರಿ ಅವರನ್ನು ತರಾಟೆಗೆ ತಗೆದುಕೊಂಡಿದ್ದಾರೆ.
ನೀವು ಒಬ್ಬ ರಾಜ್ಯಾಧ್ಯಕ್ಷರು ಯಾಕೇ ಹೀಗೆ ಮಾಡಿದೀರಾ ನಿಮ್ಮ ಮೇಲೆ ನಮ್ಮದು ತುಂಬಾ ಗೌರವ ವಿದೆ ಎನ್ನುತ್ತಾ ಮಾತನಾಡಿದ್ದಾರೆ.ಪರಸ್ಪರ ಮಾತುಗಳು ತುಂಬಾ ವಿಕೋಪಕ್ಕೆ ಹೋಗಿದ್ದು ಕೊನೆಗೆ ರಾಜ್ಯಾಧ್ಯಕ್ಷರು ಪೊನ್ ಕರೆಯನ್ನು ಬಂದ್ ಮಾಡಿದ್ದಾರೆ ಸಧ್ಯಈ ಒಂದು ಆಡಿಯೋ ವೈರಲ್ ಆಗಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..