ಬೆಂಗಳೂರು –
ರಾಜ್ಯದ ಸರ್ಕಾರಿ ಶಾಲೆಗಳಿಗೆ ಎದುರಾಗಿದೆ ದೊಡ್ಡ ದೊಂದು ಸಮಸ್ಯೆ ಶಾಲೆಗಳಲ್ಲಿನ ಆರ್ಥಿಕ ಮುಗ್ಗಟ್ಟಿನಿಂದಾಗಿ ಅಭಿವೃದ್ಧಿ ಗೆ ಕುಂಠಿತ ಶಾಲೆ ಗಳು ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿವೆ ಹೌದು ರಾಜ್ಯದ ಅನೇಕ ಶಾಲೆಗಳಿಗೆ ಕಿಟಕಿ,ಬಾಗಿಲುಗಳು ಸರಿಯಾಗಿಲ್ಲ.ಹೆಂಚು ಬಿದ್ದು ಹೋಗಿವೆ.ಶೌಚಗೃಹ ದುರಸ್ತಿ ಇಲ್ಲ.ಶುದ್ಧ ಕುಡಿಯುವ ನೀರಿಲ್ಲ ಹೀಗೆ ಇಲ್ಲಗಳ ಸರಮಾಲೆಯೇ ಇಲ್ಲಿವೆ.
ಆದರೆ ಸರ್ಕಾರ ಶಾಲೆಗಳ ನಿರ್ವಹಣೆಗೆ ವಿಶೇಷ ಅನುದಾನ ಬಿಡುಗಡೆ ಮಾಡುತ್ತಿಲ್ಲ.ಸರ್ಕಾರ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಬಿಡುಗಡೆ ಮಾಡುವ ಹಣ ಯಾವುದಕ್ಕೂ ಸಾಕಾಗುತ್ತಿಲ್ಲ.ಕನಿಷ್ಠ ಪಕ್ಷ ಕಿರಿಯ ಪ್ರಾಥಮಿಕ ಶಾಲೆಗಳಿಗೆ 25 ಸಾವಿರ ರೂ.ಹಿರಿಯ ಪ್ರಾಥಮಿಕ ಶಾಲೆಗಳಿಗೆ 50 ಸಾವಿರ ರೂ.ಗಳನ್ನು ಬಜೆಟ್ನಲ್ಲೇ ಘೋಷಿಸಿ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು.
ಪರಿಸ್ಥಿತಿ ಪ್ರತಿಕೂಲ ಪರಿಣಾಮಗಳನ್ನು ಪರಿಗ ಣಿಸಿ ಕಾಲ ಕಾಲಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕು.ಆ ಮೂಲಕ ಸರ್ಕಾರಿ ಶಾಲೆಗಳನ್ನು ಸಬಲೀಕರಣಗಳಿಸಬೇಕು ಎಂಬುದು ಶಿಕ್ಷಕರ ಸಾರ್ವಜನಿಕರ ಆಗ್ರಹ ವಾಗಿದೆ ಶಾಲೆಗಳಲ್ಲಿ ಆರ್ಥಿಕ ಮುಗ್ಗಟ್ಟು ಎದುರಾಗಿದ್ದು ಶಾಲೆಗಳು ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿವೆ.ಅನೇಕ ಶಾಲೆಗಳಿಗೆ ಕಿಟಕಿ,ಬಾಗಿಲುಗಳು ಸರಿಯಾಗಿಲ್ಲ. ಹೆಂಚು ಬಿದ್ದು ಹೋಗಿವೆ.
ಏನೇ ದುರಸ್ತಿ ಮಾಡಿಸಬೇಕು ಎಂದರೆ ಅನುದಾನದ ಕೊರತೆ ಎದುರಾಗಿದೆ ಈ ಹಿಂದೆ ಬಜೆಟ್ ನಲ್ಲಿ ಶಿಕ್ಷಣ ವಲಯಕ್ಕೆ ಕೋಟಿ ಕೋಟಿ ರೂಪಾಯಿ ಬಜೆಟ್ ಘೋಷಣೆ ಮಾಡಿದ ರಾಜ್ಯ ಸರ್ಕಾರ ಇನ್ನಾದರೂ ಇತ್ತ ನೋಡುತ್ತಾ ಎಂಬೊ ದನ್ನು ಕಾದು ನೋಡಬೇಕಿದೆ.