ಬೆಂಗಳೂರು –
ಹೆಚ್ಚಾಗುತ್ತಿದೆ ಶಿಕ್ಷಕರ ಜೇಬಿಗೆ ಭಾರ ಸದ್ದಿಲ್ಲದೆ ಕತ್ತರಿ ಬೀಳುತ್ತಿದೆ ದುಬಾರಿ ದುನಿಯಾದ ಪರಿಸ್ಥಿತಿ ಯಲ್ಲಿ ಶಿಕ್ಷಕರ ಗೋಳು ಕೇಳೊರು ಯಾರು ಹೌದು ಇಂತಹದೊಂದು ಪರಿಸ್ಥಿತಿಯಲ್ಲಿ ರಾಜ್ಯದ ಶಿಕ್ಷಕರು ಇಂದು ರಾಜ್ಯದಲ್ಲಿ ಇದ್ದಾರೆ ಶಾಲೆಗಳಲ್ಲಿ ವಾರ್ಷಿಕ 15-20 ದಿನಚಾರಣೆ ಆಚರಿಸಲಾಗು ತ್ತದೆ ಈ ದಿನಾಚರಣೆಗಳನ್ನು ಸರ್ಕಾರ ಕಡ್ಡಾಯ ಗೊಳಿಸಿದೆ.
ಜೊತೆಗೆ ವಿವಿಧ ಸಭೆಗಳನ್ನು ಮುಖ್ಯ ಶಿಕ್ಷಕರು ನಡೆಸಬೇಕಾಗುತ್ತದೆ.ಆದರೆ ಇದಕ್ಕೆ ಕನಿಷ್ಟ ಹಣವನ್ನೂ ನೀಡುತ್ತಿಲ್ಲ.ಕಾರಣ ಶಿಕ್ಷಕರು ಹಣ ಹೊಂದಿಸಲು ಪರದಾಡುತ್ತಾರೆ.ಇದು ಅನೇಕ ಸಂದರ್ಭಗಳಲ್ಲಿ ಶಿಕ್ಷಕರ ಜೇಬಿಗೆ ಭಾರವೂ ಆಗಿದ್ದು ಆಗುತ್ತಿದೆ ಹೀಗಾಗಿ ಶಿಕ್ಷಕರ ಪರದಾಟ ನೋವು ಯಾರು ಕೇಳುತ್ತಿಲ್ಲ ಕಾಣುತ್ತಿಲ್ಲ
ಕಚೇರಿಯ ದಾಖಲೆ ಪುಸ್ತಕಗಳು(ದಾಖಲಾತಿ ಪುಸ್ತಕ,ಹಾಳೆಗಳು,ಹಾಜರಾತಿ ಪುಸ್ತಕ, ವರ್ಗಾ ವಣೆ ಪತ್ರ,ಅಂಕಪಟ್ಟಿ ಇತರೆ ತರಗತಿಗೆ ಅಗತ್ಯ ವಿರುವ ಅಂಕಪಟ್ಟಿ ಸೀಮೆಸುಣ್ಣ,ಡಸ್ಟರ್ ಇತ್ಯಾದಿ ಬೋಧನೋಪಕರಣ ತಯಾರಿಕೆ ಖರೀದಿ ಕಟ್ಟಡದ ಸಣ್ಣಪುಟ್ಟ ದುರಸ್ತಿ ಕಿಟಕಿ,ಬಾಗಿಲು, ಶೌಚ ಗೃಹ,ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಪೀಠೋಪಕರಣ ದುರಸ್ತಿ ಕ್ರೀಡಾಸಾಮಗ್ರಿಗಳ ದುರಸ್ತಿ,ಖರೀದಿ,ವಿದ್ಯುತ್ ,ದೂರವಾಣಿ ಬಿಲ್ ಪಾವತಿ ಸಮಸ್ಯೆ ಆಗುತ್ತಿದೆ
ಇನ್ನೂ ಇದರೊಂದಿಗೆ ದಿನಪತ್ರಿಕೆ,ವಾರಪತ್ರಿಕೆ ವೆಚ್ಚ,ಶಾಲಾ ಸ್ವಚ್ಛತಾ ವೆಚ್ಚವೂ ಹಾಗೇ ಇತ್ತೀಚಿಗೆ ಬಿಸಿಯೂಟ ದ ಒಂದೊಂದು ಖರ್ಚುಗಳ ಲೆಕ್ಕವೂ ಕೂಡಾ ಹೆಚ್ಚಾಗುತ್ತಿದೆ