ಬೆಂಗಳೂರು –
7ನೇ ವೇತನ ಆಯೋಗದ ವಿಚಾರದಲ್ಲಿ ಮಿನಾ ಮೇಷವನ್ನು ಮಾಡುತ್ತಿರುವ ಹಾಗೇ ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ತರಲಾಗಿದ್ದು ಹೀಗಾಗಿ ಈ ಒಂದು ವಿಚಾರ ಕುರಿತಂತೆ ಅಂತಿಮವಾದ ತೀರ್ಮಾನ ವನ್ನು ತಗೆದುಕೊಳ್ಳುವ ನಿಟ್ಟಿನಲ್ಲಿ ರಾಜ್ಯದ ಸರ್ಕಾರಿ ನೌಕರರ ಸಂಘಟನೆ ಮಂಗಳವಾರ ತುರ್ತು ಸಭೆಯನ್ನು ಸಂಘದ ರಾಜ್ಯಾಧ್ಯಕ್ಷ ರಾಗಿರುವ ಷಡಾಕ್ಷರಿ ಅವರು ಕರೆದಿದ್ದಾರೆ
ಈ ಒಂದು ಸಭೆಯ ಮುನ್ನವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತುರ್ತು ಸಚಿವ ಸಂಪುಟದ ಸಭೆಯನ್ನು ಕರೆದಿದ್ದಾರೆ. ಹೌದು ಸೋಮವಾರ ಈ ಒಂದು ಸಭೆಯನ್ನು ಕರೆದಿದ್ದು ಹೀಗಾಗಿ ಈ ಒಂದು ಸಭೆಯಲ್ಲಿ ಪ್ರಮುಖವಾಗಿ ಸಧ್ಯ ರಾಜ್ಯದ ಸರ್ಕಾರಿ ನೌಕರ ರಿಗೆ ದೊಡ್ಡ ತಲೆನೋವಾಗಿರುವ 7ನೇ ವೇತನ ಆಯೋಗ ಜಾರಿಗೆ ತರುವ ಕುರಿತಂತೆ ಇದರೊಂ ದಿಗೆ ಹೊಸ ಪಿಂಚಣಿ ಯೋಜನೆಯನ್ನು ರದ್ದು ಮಾಡಿ ಹಳೆಯ ಪಿಂಚಣಿ ಯೋಜನೆಗೆ ಪಟ್ಟು ಹಿಡಿದಿರುವ ಸರ್ಕಾರಿ ನೌಕರರ ಬೇಡಿಕೆ ಕುರಿತಂತೆ ಸಚಿವ ಸಂಪುಟದ ಸಭೆಯಲ್ಲಿ ಚರ್ಚೆಯಾಗುತ್ತಾ ಎಂಬ ಕುರಿತಂತೆ ತೀವ್ರ ಕುತೂಹಲ ಕೆರಳಿಸಿದೆ
ಹೀಗಾಗಿ ಈ ಒಂದು ಸಚಿವ ಸಂಪುಟದ ಸಭೆ ಸಾಕಷ್ಟು ಕುತೂಹಲವನ್ನು ಕೆರಳಿಸಿದ್ದು ಏನೇನು ಚರ್ಚೆಯಾಗುತ್ತದೆ ಎಂಬ ಕುರಿತಂತೆ ರಾಜ್ಯದ ಸಮಸ್ತ ಸರ್ಕಾರಿ ನೌಕರರ ಸಂಘಟನೆಯವರು ಹಾಗೇ ರಾಜ್ಯಾಧ್ಯಕ್ಷರು ಕಾಯುತ್ತಿದ್ದಾರೆ.ಒಂದು ವೇಳೆ ಈ ಎರಡು ವಿಚಾರಗಳ ಕುರಿತಂತೆ ಸಚಿವ ಸಂಪುಟದ ಸಭೆಯಲ್ಲಿ ಪ್ರಮುಖವಾದ ನಿರ್ಧಾರ ವನ್ನು ತಗೆದುಕೊಂಡರೆ ನಾಡಿದ್ದು ಸಭೆ ಯಲ್ಲಿ ಮತ್ತೆ ಬೇರೆ ಚರ್ಚೆಯಾಗುತ್ತದೆ ಚರ್ಚೆಯಾಗದಿ ದ್ದರೆ ನಾಡಿದ್ದು ಸಭೆಯಲ್ಲಿ ಮುಂದಿನ ಹೋರಾ ಟದ ಕುರಿತಂತೆ ಪ್ರಮುಖವಾದ ನಿರ್ಧಾರವನ್ನು ತಗೆದುಕೊಳ್ಳುವ ಲಕ್ಷಣಗಳಿದ್ದು
ಸಧ್ಯ ವಿಧಾನ ಸಭಾ ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿ ಸರ್ಕಾರಕ್ಕೆ ರಾಜ್ಯ ಸರ್ಕಾರದ ಸರ್ಕಾರಿ ನೌಕರರು ಈ ಎರಡು ವಿಚಾರಗಳನ್ನು ಮುಂದಿ ಟ್ಟುಕೊಂಡು ಬಿಸಿ ಮುಟ್ಟಿಸಲು ಈಗಾಗಲೇ ತೀರ್ಮಾನವನ್ನು ತಗೆದುಕೊಂಡಿದ್ದು ಹೀಗಾಗಿ ಈಗಾಗಲೇ ಮುಖ್ಯಮಂತ್ರಿ ಹೇಳಿದಂತೆ 7ನೇ ವೇತನ ಆಯೋಗದ ವಿಚಾರದಲ್ಲಿ ಗಟ್ಟಿ ನಿರ್ಧಾರ ವನ್ನು ತಗೆದುಕೊಂಡು ನಂತರ ಹಳೆ ಪಿಂಚಣಿ ಯೋಜನೆಯನ್ನು ಅನುಷ್ಠಾನಗೊಳಿಸಲು ಬದ್ದ ರಾದರೆ ಮಾತ್ರ ಸರ್ಕಾರಿ ನೌಕರರು ಶಾಂತರಾಗು ತ್ತಾರೆ ಇಲ್ಲವಾದರೆ ಸಿಡಿದೆಳೊದು ಪೈನಲ್.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..