ಬೀದರ್ –
ಹೌದು ಅಡುಗೆ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಸರ್ಕಾರಿ ಶಾಲಾ ಶಿಕ್ಷಕರೊಬ್ಬರನ್ನು ಡಿಡಿಪಿಐ ಅಮಾನತು ಗೊಳಿಸಿ ಆದೇಶ ಮಾಡಿರುವ ಘಟನೆ ಬೀದರ್ ನಲ್ಲಿ ನಡೆದಿದೆ.ಅಡುಗೆ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿ ಅಸಭ್ಯವಾಗಿ ವರ್ತಿಸಿದ್ದ ಎಂಬ ಆರೋಪದ ಹಿನ್ನೆಲೆಯಲ್ಲಿ ಕಮಲನಗರ ತಾಲೂಕಿನ ಖತಗಾಂವ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ ಶಿವಕುಮಾರ್ ಡೊಂಗರೆ ಅವರನ್ನು ಡಿಡಿಪಿಐ ಅಮಾನತು ಮಾಡಲಾಗಿದೆ
ಲೈಂಗಿಕ ಕಿರುಕುಳಕ್ಕೆ ಪ್ರಯತ್ನಿಸಿದ್ದಲ್ಲದೇ ಅಸಭ್ಯ ವಾಗಿ ವರ್ತಿಸುತ್ತಿದ್ದ ಶಿಕ್ಷಕನ ವಿರುದ್ಧ ಗ್ರಾಮಸ್ಥರು ಮತ್ತು ಅಡುಗೆ ಸಿಬ್ಬಂದಿ ನೀಡಿದ ದೂರಿನನ್ವಯ ವಿಷಯ ಪರಿವೀಕ್ಷಕರು ಜಂಟಿ ವಿಚಾರಣಾ ತಂಡ ಶಾಲೆಗೆ ತೆರಳಿ ಪರಿಶೀಲಿಸಿತ್ತು.ಆರೋಪ ಸಾಬೀತಾಗಿರುವ ಕುರಿತು ವರದಿ ಸಲ್ಲಿಸಿದ್ದರಿಂದ 15 ದಿನದೊಳಗೆ ಶಿಕ್ಷಕನಿಗೆ ರಕ್ಷಣಾ ಹೇಳಿಕೆ ನೀಡುವಂತೆ ನೋಟಿಸ್ ನೀಡಲಾಗಿತ್ತು.ಆದರೆ, ಅವಧಿ ಮುಗಿದರೂ ಶಿಕ್ಷಕ ಈ ಬಗ್ಗೆ ಕಚೇರಿಗೆ ತಮ್ಮ ಹೇಳಿಕೆ ದಾಖಲಿಸದ ಕಾರಣ ಶಿಕ್ಷಕನ ಬೇಜವಾಬ್ದಾರಿ ಮತ್ತು ಸರ್ಕಾರಿ ನೌಕರರಿಗೆ ತರವಲ್ಲದ ರೀತಿಯ ವರ್ತನೆ ಎಂಬ ಕಾರಣ ನೀಡಿ ಆರೋಪಿತ ಶಿಕ್ಷಕ ಡೊಂಗರೆ ಅವರನ್ನು ಅಮಾನತು ಮಾಡಲಾಗಿದೆ.
ಸುದ್ದಿ ಸಂತೆ ನ್ಯೂಸ್…..