ಬಸವಕಲ್ಯಾಣ –
ಆಂಧ್ರದ ಚಿತ್ತೂರ ಹತ್ತಿರದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದ ಪಿಎಸ್ಐ ಅವಿನಾಶ ಕಾಶಿನಾಥ ಅಂತ್ಯಕ್ರಿಯೆ ಸ್ವಗ್ರಾಮ ತಾಲ್ಲೂಕಿನ ದಾಸರವಾಡಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಬೆಂಗಳೂರಿನ ಶಿವಾಜಿ ನಗರ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಅವಿನಾಶ ಜುಲೈ 24ರಂದು ಗಾಂಜಾ ಮಾರಾಟಗಾರರ ಪತ್ತೆಗೆ ಹೋದಾಗ ಕಾರು ಸೇತುವೆಯ ಗೋಡೆಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು.
ಇವರನ್ನೊಳಗೊಂಡು ಮೂವರು ಅಪಘಾತದಲ್ಲಿ ಮೃತ ಪಟ್ಟಿದ್ದರು.ದಾಸರವಾಡಿಯಲ್ಲಿನ ಅವರ ಹೊಲದಲ್ಲಿ ಅಂತ್ಯಕ್ರಿಯೆ ನೆರವೆರಿಸಲಾಯಿತು.ಪೊಲೀಸರಿಂದ ಮೂರು ಸುತ್ತಿನ ಗುಂಡು ಹಾರಿಸುವ ಮೂಲಕ ಗೌರವವನ್ನು ಸಲ್ಲಿಸಿ ನಂತರ ಅಂತಿಮ ಸಂಸ್ಕಾರ ಮಾಡಲಾಯಿತು.
ಐಜಿಪಿ ಮನೀಷ ಕರ್ಬಿಕರ್,ಶಾಸಕರಾದ ರಾಜಶೇಖರ ಪಾಟೀಲ ಹುಮನಾಬಾದ್,ಶರಣು ಸಲಗರ ಬಸವಕ ಲ್ಯಾಣ,ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್, ಹಾರಕೂಡ ಚನ್ನವೀರ ಶಿವಾಚಾರ್ಯ,ಉಪ ವಿಭಾಗಾ ಧಿಕಾರಿ ರಮೇಶ ಕೋಲಾರ ಹಾಗೂ ಸುತ್ತಲಿನ ಗ್ರಾಮಗಳ ಅಪಾರ ಜನರು ಪಾಲ್ಗೊಂಡಿದ್ದರು.