ಶಿವಮೊಗ್ಗ –
ಭಡ್ತಿ ವಿಚಾರ ದಲ್ಲಿ ರಾಜ್ಯದ ಶಿಕ್ಷಕ ರಿಗೆ ಮತ್ತೊಂದು ತಲೆನೋವು ಶುರುವಾಗಿದೆ ಹೌದು ಪರೀಕ್ಷೆ ಬರೆಯಿಸಿ ಅದರೊಂದಿಗೆ ಭಡ್ತಿ ನೀಡಲಾಗುತ್ತದೆ ಎಂದು ಶಿಕ್ಷಣ ಸಚಿವರು ಪದೇ ಪದೇ ಹೇಳತಾ ಇದ್ದಾರೆ.ಈ ಕುರಿತು ಈಗಾಗಲೇ ಸುತ್ತೋಲೆ ಕೂಡಾ ಹೊರಬಿದ್ದಿದ್ದು ಇದಕ್ಕೆ ನಾಡಿನ ಶಿಕ್ಷಕರು ತೀವ್ರವಾದ ಅಸಮಾಧಾನವನ್ನು ವ್ಯಕ್ಯ ಪಡಿಸುತ್ತಿದ್ದಾರೆ.ಅವರಿವರಿಗೆ ಮನವಿ ಯನ್ನು ನೀಡಿದ್ದು ಆದರೂ ಕೂಡಾ ಶಿಕ್ಷಣ ಸಚಿವರು ಕೇಳುತ್ತಿಲ್ಲ.
ಇನ್ನೂ ಅತ್ತ ಶಿಕ್ಷಣ ಸಚಿವರು ಪಟ್ಟು ಹಿಡಿದಿದ್ದು ಈ ಒಂದು ವಿಚಾರ ಕುರಿತು ಶಿಕ್ಷಕರ ಧ್ವನಿಯಾಗಿರುವ ಸಂಘಟನೆಯ ನಾಯಕರು ಮಾತ್ರ ಮಾತನಾಡುತ್ತಿಲ್ಲ.ಇವರ ಈ ಒಂದು ಮೌನದಿಂದಾಗಿ ರಾಜ್ಯದ ಶಿಕ್ಷಕರು ಯಾರಿಗೂ ಯಾವ ಇಲಾಖೆಗೂ ಇಲ್ಲದ ಅವೈಜ್ಞಾನಿಕ ವರ್ಗಾವಣೆಯ ನೀತಿ ಯಿಂದಾಗಿ ಆತಂಕದಲ್ಲಿದ್ದ ಸಿಡಿದೆದ್ದಿದ್ದಾರೆ ಶಿಕ್ಷಣ ಸಚಿವರು ಇಲಾಖೆ ಸ್ಪಂದಿಸದಿದ್ದರೆ ಶಿಕ್ಷಕರೇ ಬರುವ ದಿನಗಳಲ್ಲಿ ಬೀದಿಗಿಳಿಯಲಿದ್ದಾರೆ