ಶಿವಮೊಗ್ಗ –
ಈಗಾಗಲೇ ವರ್ಗಾವಣೆ ಇಲ್ಲದೇ ಆತಂಕಗೊಂಡಿ ರುವ ಶಾಕ್ ಆಗಿರುವ ನಾಡಿನ ಶಿಕ್ಷಕರಿಗೆ ಮತ್ತೊಂದು ಶಾಕ್ ಎದುರಾಗಿದೆ.ಹೌದು ಈಗಾಗಲೇ ಏನಾದರೂ ಮಾಡಿ ಈಬಾರಿಯಾದರೂ ವರ್ಗಾವಣೆ ಸಿಗಲಿ ಎನ್ನುತ್ತಿರುವ ಶಿಕ್ಷಕರಿಗೆ ಸಧ್ಯ ಶಿಕ್ಷಣ ಸಚಿವರು ಮತ್ತೊಂದು ಶಾಕ್ ನೀಡಿದ್ದಾರೆ.ಈ ಬಾರಿ ಪಠ್ಯ ಕಡಿತಗೊಳಿಸದೆ ಶಿಕ್ಷಕರ ರಜೆ ಕಡಿತಗೊಳಿಸಲಾಗು ವುದು.ರಜೆ ಕಡಿಮೆ ಮಾಡಿ ಕಲಿಕಾ ಅವಧಿ ನಷ್ಟ ಸರಿದೂಗಿಸಲು ಚಿಂತನೆ ನಡೆಸಲಾಗಿದೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದರು.
ಶಿವಮೊಗ್ಗ ದಲ್ಲಿ ಮಾತನಾಡಿದ ಅವರು ಪಠ್ಯ ಕಡಿತ ಗೊಳಿಸದೆ ಪಾಠಗಳನ್ನು ಪೂರ್ಣಗೊಳಿಸುವ ಚಿಂತನೆ ಇದೆ ಎಂದರು.ಇರುವ ಪಠ್ಯ ಪೂರ್ಣಗೊಳಿ ಸಿದರೆ ಮಕ್ಕಳಿಗೆ ಅನುಕೂಲವಾಗುತ್ತದೆ.ಪಠ್ಯ ಕಡಿತಗೊಳಿಸಿದರೆ ಅವರಿಗೆ ನಷ್ಟವಾಗುತ್ತದೆ.ಕಳೆದ ಒಂದೂವರೆ ವರ್ಷದಿಂದ ಮಕ್ಕಳಿಗೆ ಸಮರ್ಪಕ ವಾಗಿ ಕಲಿಕೆ ಸಾಧ್ಯವಾಗಿಲ್ಲ.
ಈ ಹಿನ್ನೆಲೆಯಲ್ಲಿ ಶಿಕ್ಷಕರ ರಜೆ ಕಡಿತಗೊಳಿಸಿ ಪೂರ್ಣ ಪಠ್ಯಕ್ರಮ ತೆಗೆದುಕೊಳ್ಳುವ ಚಿಂತನೆ ನಡೆದಿದೆ ಎಂದರು.ಇದಕ್ಕೆ ಶಿಕ್ಷಕರ ಸಹಕಾರ ಕೂಡ ಅಗತ್ಯವಾಗಿದೆ. ಪಠ್ಯ ಕೈಬಿಡುವುದರಿಂದ ಮಕ್ಕಳ ಶೈಕ್ಷಣಿಕ ಬೆಳವಣಿಗೆ ಕುಂಠಿತವಾಗುತ್ತದೆ. ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಶಿಕ್ಷಕರ ರಜೆ ಕಡಿತ ಗೊಳಿಸುವ ಚಿಂತನೆಯಿದೆ. ಕಲಿಕಾ ಅವಧಿ ನಷ್ಟ ಸರಿದೂಗಿಸಲು ಶಿಕ್ಷಕರ ಸಹಕಾರ ಪಡೆಯಲಾಗು ವುದು ಎಂದು ಸಚಿವರು ತಿಳಿಸಿದರು.
ಶಿಕ್ಷಣ ಸಚಿವರ ಮಾತನ್ನು ಕೇಳತಾ ಇದ್ದರೆ ಇತ್ತ ನಾಡಿನ ಶಿಕ್ಷಕರು ಇದರಿಂದಾಗಿ ಆತಂಕಗೊಂಡಿದ್ದು ಬೇಸರಗೊಂಡಿದ್ದಾರೆ.ಈಗಾಗಲೇ ನಮಗೆ ಸರಿಯಾದ ವರ್ಗಾವಣೆ ಸಿಗುತ್ತಿಲ್ಲ ಹೀಗಾಗಿ ಸಧ್ಯ ಮತ್ತೊಂದು ಸಮಸ್ಯೆ ಎದುರಾಗಿದ್ದು ರಜೆ ರಹಿತ ಇಲಾಖೆಯನ್ನಾಗಿ ಮಾಡಿ ಬಿಡಿ ಎಂದಿದ್ದಾರೆ.