ಕೊಪ್ಪಳ –
ಸರ್ಕಾರಿ ಶಾಲೆಯಲ್ಲಿ ಮೊಟ್ಟೆ ಕೊಡುತ್ತಿರುವ ವಿಚಾರ ಕುರಿತಂತೆ ತಂದೆಯೊಬ್ಬರು ತಮ್ಮ ಮಗನನ್ನು ಸರ್ಕಾರಿ ಶಾಲೆಯಿಂದ ಖಾಸಗಿ ಶಾಲೆಗೆ ಸೇರಿಸಿದ ಘಟನೆ ಕೊಪ್ಪಳ ದಲ್ಲಿ ನಡೆದಿದೆ.ಹೌದು ಸರ್ಕಾರಿ ಶಾಲೆಯಲ್ಲಿ ಮೊಟ್ಟೆ ವಿತರಣೆಗೆ ಪರ-ವಿರೋಧ ಅಭಿಪ್ರಾಯದ ಕೇಳಿ ಬಂದ ಬೆನ್ನಲ್ಲೇ ಇಲ್ಲೊಬ್ಬ ಪೋಷಕರೊಬ್ಬರು ತಮ್ಮ ಮಗನ ಟಿಸಿ ತಗೆದುಕೊಂಡು ಖಾಸಗಿ ಶಾಲೆಗೆ ಸೇರಿಸಿದ್ದಾರೆ.ಮೊಟ್ಟೆ ನೀಡಿದ ಕಾರಣಕ್ಕೆ ಮಗನ ಟಿಸಿಯನ್ನು ಪಡೆದು ಖಾಸಗಿ ಶಾಲೆಗೆ ಸೇರಿಸಿದ್ದು ಕೊಪ್ಪಳದ ರೈಲ್ವೆ ಸ್ಟೇಷನ್ ಎದುರಿಗಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿ ಓದುತ್ತಿರುವ ಮಗನ ಟಿಸಿಯನ್ನು ಪಡೆದ ಕೊಪ್ಪಳ ದ ನಾಗರಿಕ ಹಾಗೂ ಲಿಂಗಾಯಿತ ಧರ್ಮ ಮಹಾಸಭಾದ ರಾಜ್ಯಾಧ್ಯಕ್ಷ ವೀರಣ್ಣ ಕೊರ್ಲಹಳ್ಳಿ ಖಾಸಗಿ ಶಾಲೆಗೆ ಸೇರಿಸಿದ್ದಾರೆ.
ಬಸವಧರ್ಮದ ಆಚರಣೆ ಮಾಡುವ ನಾವು ಮೊಟ್ಟೆ ತಿನ್ನುವುದಿಲ್ಲ.ಶಾಲೆಯಲ್ಲಿ ಮೊಟ್ಟೆ ಕೊಟ್ಟಾಗ ಮೊದಲು ಒಂದೆರಡು ದಿನ ಮಗು ತಿನ್ನುವುದಿಲ್ಲ.ನಂತರ ಮೊಟ್ಟೆ ತಿನ್ನುವುದನ್ನು ಕಲಿತು ಮನೆಯಲ್ಲಿ ಮೊಟ್ಟೆ ಮಾಡಿಕೊಡಿ ಎಂದು ಹೇಳಿದರೆ ನಾವು ಏನು ಮಾಡಬೇಕು ಎಂದು ವೀರಣ್ಣ ಪ್ರಶ್ನಿಸಿದ್ದಾರೆ. ಈ ಕಾರಣದಿಂದ ಮಗನನ್ನು ಖಾಸಗಿ ಶಾಲೆಗೆ ಸೇರಿಸಿದ್ದು ಪರ ವಿರೋಧದ ನಡುವೆ ಈ ಒಂದು ಬೆಳವಣಿಗೆಯಾಗಿದೆ.