ಬೆಂಗಳೂರು –
ಬಜೆಟ್ ಮಂಡನೆ ವೇಳೆ ರಾಜ್ಯದ ಸರ್ಕಾರಿ ನೌಕರರಿಗೆ ಈಗಾಗಲೇ 7ನೇ ವೇತನ ಆಯೋಗದ ವಿಚಾರ ಕುರಿತು ಮುಖ್ಯಮಂತ್ರಿ ಯಾವುದೇ ರೀತಿಯ ಪ್ರಸ್ತಾಪವನ್ನು ಮಾಡಲಿಲ್ಲ ಒಂದು ಕಡೆಗೆ ಈಗಾಗಲೇ ವೇತನ ಪರಿಷ್ಕರಣೆ ವಿಚಾರ ಕುರಿತು ಈಗಾಗಲೇ ಸಮಿತಿ ಯನ್ನು ರಚನೆ ಮಾಡಲಾಗಿದೆ ಆದರೆ ಇತ್ತ ಈ ಒಂದು ವಿಚಾರ ಕುರಿತು ಮುಖ್ಯಮಂತ್ರಿ ಯಾವುದೇ ಘೋಷಣೆ ಯನ್ನು ಮಾಡಲಿಲ್ಲ 7ನೇ ವೇತನ,NPS ವಿಚಾರ ಬಗ್ಗೆ ಬಜೆಟ್ ನಲ್ಲಿ ಮಾತನಾಡದ ಮುಖ್ಯಮಂತ್ರಿ ವಿರುದ್ಧ ಈಗ ರಾಜ್ಯದ ಸರ್ಕಾರಿ ನೌಕರರು ಸಿಡಿದೆದ್ದಿದ್ದಾರೆ ಅಲ್ಲದೆ ರಾಜ್ಯದ ಸರ್ಕಾರಿ ನೌಕರರು ಹೋರಾಟಕ್ಕೆ ನಿರ್ಧಾರವನ್ನು ಕೈಗೊಂ ಡಿದ್ದಾರೆ.
ಹಣಕಾಸು ವರ್ಷ 2023-2024ನೇ ಕರ್ನಾಟಕ ರಾಜ್ಯ ಬಜೆಟ್ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ ಬಳಿಕ 7ನೇ ವೇತನ ಆಯೋಗವನ್ನು ಜಾರಿ ಮಾಡುವ ಬಗ್ಗೆ ಮಾಹಿತಿ ನೀಡಿದ್ದಾರೆ.ಹಾಗೆಯೇ ಇದಕ್ಕಾಗಿ ತಗುಲುವ ವೆಚ್ಚವನ್ನು ಕೂಡಾ ಉಲ್ಲೇಖಿಸಿದ್ದಾರೆ.ಈ ಬಗ್ಗೆ ಸಮಿತಿಯು ವರದಿಯನ್ನು ಕೂಡಾ ನೀಡಲಿದೆ ಎಂದು ತಿಳಿಸಿದ್ದಾರೆ.
ಸಮಿತಿಯು ತನ್ನ ಕೊನೆಯ ಅಥವಾ ಮಧ್ಯಂತರ ವರದಿಯನ್ನು ಸಲ್ಲಿಸಲಿದೆ.ಈ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರವು ಶೀಘ್ರವೇ ಕ್ರಮಕೈಗೊಳ್ಳಲಿದೆ. ಬಜೆಟ್ನಲ್ಲಿ ಇದಕ್ಕಾಗಿ ಮೊತ್ತವನ್ನು ಕೂಡಾ ನಿಗದಿಪಡಿಸಲಾಗುತ್ತದೆ.7ನೇ ವೇತನ ಆಯೋ ಗದ ಜಾರಿಗೆ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದ್ದಾರೆ.ಇದು ಒಂದು ವಿಚಾರ ವಾದರೆ ಇನ್ನೂ ಪ್ರಮುಖವಾಗಿ ಬಜೆಟ್ ನಲ್ಲಿ ಘೋಷಣೆ ಮಾಡದ ಈ ಒಂದು ವಿಚಾರ ವನ್ನು ಲಿಖಿತವಾಗಿ ಒಂದು ಉತ್ತರವನ್ನು ನೀಡಿದ್ದು ಇತ್ತ ಹೇಳಿಕೆ ರೂಪದಲ್ಲಿ ಮತ್ತೊಂದು ಬೇರೆಯಾಗಿ ನೀಡಿದ್ದಾರೆ ಹೀಗಾಗಿ ಗೊಂದಲದ ಗೂಡಾಗಿರುವ ಮುಖ್ಯಮಂತ್ರಿ ಅವರ ಈ ಒಂದು ನಿರ್ಧಾರ ದಿಂದ ರಾಜ್ಯದ ಸರ್ಕಾರಿ ನೌಕರರ ಸಂಘಟನೆ ತುತ್ತಾಗಿ ಸಭೆಯನ್ನು ಕರೆದಿದ್ದು ಮುಂದಿನ ಹೋರಾಟದ ಕುರಿತು ಮಹತ್ವದ ನಿರ್ಧಾರವನ್ನು ಕೈಗೊಳ್ಳಲಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು……