ಬೆಂಗಳೂರು –
ಸರ್ಕಾರಿ ನೌಕರರು ಮೃತರಾದರೆ ಪಿಂಚಣಿ ವಿಚಾರದಲ್ಲಿ ಮಹತ್ವದ ತೀರ್ಪು ನೀಡಿದ ಹೈಕೋರ್ಟ್ – ಗೊಂದಲದಲ್ಲಿದ್ದ ಪಿಂಚಣಿ ಹಂಚಿಕೆ ವಿಚಾರವನ್ನು ನಿವಾರಣೆ ಮಾಡಿದ ನ್ಯಾಯಮೂರ್ತಿಗಳು
ರಾಜ್ಯ ಸರ್ಕಾರಿ ನೌಕರರು ಕರ್ತವ್ಯದ ಮೇಲಿ ದ್ದಾಗ ಮೃತರಾದರೆ ನಂತರ ಪಿಂಚಣಿ ಹಂಚಿಕೆಯ ವಿಚಾರ ಕುರಿತಂತೆ ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ.ಹೌದು ಸರ್ಕಾರಿ ನೌಕರನ ಎರಡನೇ ಪತ್ನಿಗೆ ಕುಟುಂಬ ಪಿಂಚಣಿ ಅಧಿಕಾರ ಇಲ್ಲ ಎಂಬ ತೀರ್ಪನ್ನು ಹೈಕೋರ್ಟ್ ಆದೇಶ ಮಾಡಿ ತೀರ್ಪನ್ನು ನೀಡಿದೆ.
ಮೊದಲ ಪತ್ನಿಗೆ ಮಾತ್ರ ಮೃತ ನೌಕರನ ಪತಿಯ ಕುಟುಂಬಕ್ಕೆ ಪಿಂಚಣಿ ಅಧಿಕಾರವಿದೆ ಎಂದಿದೆ. ಇನ್ನೂ ಪತ್ನಿ ಬದುಕಿದ್ದಾಗ ಎರಡನೇ ಮದುವೆಗೆ ಮಾನ್ಯತೆ ಇಲ್ಲ ಹೀಗಾಗಿ ಪಿಂಚಣಿಯ ಹಕ್ಕನ್ನು ಎರಡನೇ ಪತ್ನಿ ಕೇಳುವಂತಿಲ್ಲ ಎಂಬ ಅಂಶಗ ಳನ್ನು ಕೂಡಾ ಉಲ್ಲೇಖ ಮಾಡಿರುವ ಮುಖ್ಯ ನ್ಯಾಯಮೂರ್ತಿಗಳಾದ ಪ್ರಸನ್ನ ಬಿ.ವರಾಳೆ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠವು ಈ ಒಂದು ಆದೇಶವನ್ನು ನೀಡಿದೆ.
ಇದರೊಂದಿಗೆ ಮೃತ ಸರ್ಕಾರಿ ನೌಕರನ 2ನೇ ಪತ್ನಿಗೆ ಕುಟುಂಬ ಪಿಂಚಣಿ ಅಧಿಕಾರ ಇಲ್ಲ ಎಂಬ ಆದೇಶದೊಂದಿಗೆ ಮಹತ್ವದ ಆದೇಶವನ್ನು ಮಾಡಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..