ಬೆಂಗಳೂರು –
ಎರಡು ದಿನಗಳ ಹಿಂದಷ್ಟೇ ದೇಶದಾದ್ಯಂತ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗಿದೆ.ಪ್ರಧಾನಿ ನರೇಂದ್ರ ಮೋದಿಯವರು ‘ಹರ್ ಘರ್ ತಿರಂಗಾ’ ಅಭಿಯಾನದ ಅಂಗವಾಗಿ ನೀಡಿದ ಕರೆಯಂತೆ ಪ್ರತಿಯೊಂದು ಮನೆ ಮೇಲೂ ರಾಷ್ಟ್ರಧ್ವಜ ಹಾರಾಡಿದೆ.ಇದರ ಮಧ್ಯೆ ಕರ್ನಾಟ ಕದ ಕೆಲವು ಶಾಲೆಗಳಲ್ಲಿ ರಾಷ್ಟ್ರಗೀತೆಯನ್ನು ಪ್ರತಿನಿತ್ಯ ಹಾಡಿಸದಿರುವ ವಿಷಯ ಬಹಿರಂಗವಾಗಿದ್ದು ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಶಾಲೆಗ ಳಲ್ಲಿ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯ ಮಾಡಲು ನಿರ್ಧರಿಸಿದೆ.
ಹೀಗಾಗಿ ಮದರಸಗಳು ಸೇರಿದಂತೆ ಪ್ರತಿಯೊಂದು ಶಾಲೆ ಗಳು ಇನ್ನು ಮುಂದೆ ರಾಷ್ಟ್ರಗೀತೆಯನ್ನು ಹಾಡುವುದು ಕಡ್ಡಾಯವಾಗಲಿದೆ.ಈ ಕುರಿತ ಆದೇಶ ಇನ್ನೆರಡು ದಿನಗ ಳೊಳಗಾಗಿ ಹೊರಬೀಳುವ ಸಾಧ್ಯತೆಯಿದ್ದು ಈ ಆದೇಶ ವನ್ನು ಉಲ್ಲಂಘಿಸಿದ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳ ಲಾಗುತ್ತದೆ.