ಚಿಕ್ಕೋಡಿ –
ಹೌದು ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ವಿಚಾರಕ್ಕಾಗಿ ಅವರನ್ನು ಅಮಾನತು ಮಾಡು ವಂತೆ ಪಟ್ಟು ಹಿಡಿದ ಘಟನೆ ಚಿಕ್ಕೋಡಿಯಲ್ಲಿ ನಡೆದಿದ್ದು ಸಧ್ಯ ಇದರಿಂದಾಗಿ ಅಮಾನತಾಗುವ ಭೀತಿಯಲ್ಲಿ ಶಿಕ್ಷಕಿ ಇದ್ದಾರೆ.ಅಷ್ಟಕ್ಕೂ ಸರ್ಕಾರಿ ಶಾಲೆಯಲ್ಲಿ ಮಕ್ಕಳು ತಮ್ಮ ಟೀಚರ್ ಹುಟ್ಟು ಹಬ್ಬ ಇದೆ ಎಂದುಕೊಂಡು ಕೇಕ್ ತಗೆದುಕೊಂಡು ಕತ್ತರಿಸಿ ಆಚರಣೆ ಮಾಡಿದ್ದೇ ದೊಡ್ಡ ತಪ್ಪಾಗಿದ್ದು
ಹೀಗಾಗಿ ಇದನ್ನೇ ಮುಂದೆ ಇಟ್ಟುಕೊಂಡಿರುವ SDMC ಸದಸ್ಯರು ಮೇಲಾಧಿಕಾರಿಗಳಿಗೆ ಇವರ ಮೇಲೆ ಶಿಸ್ತು ಕ್ರಮವನ್ನು ಕೈಗೊಳ್ಳುವಂತೆ ಪಟ್ಟು ಹಿಡಿದಿದ್ದಾರೆ.ನವೆಂಬರ್ 5ನೇ ಜಲಾಲಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿಯೇ ಡಿ.ಡಿ.ಕಾಂ ಬಳೆ ಎಂಬ ಶಿಕ್ಷಕಿಯೊಬ್ಬರು ಹುಟ್ಟುಹಬ್ಬವನ್ನು ಮಕ್ಕಳು ಆಚರಿಸಿದ್ದರು.
ಶಾಲಾ ಅವಧಿ ಮುಗಿದ ಮೇಲೆ ಶಿಕ್ಷಕಿ ಕಾಂಬಳೆ ತಮ್ಮ ಹುಟ್ಟುಹಬ್ಬವನ್ನ ಮಕ್ಕಳೊಡನೆ ಸೇರಿ ಕೊಂಡು ಆಚರಿಸಿದ್ದರು ಆದರೆ ನಿಯಮದ ಪ್ರಕಾರ ಸರ್ಕಾರಿ ಸರ್ಕಾರಿ ಅನುದಾನಿತ ಸಂಸ್ಥೆ ಗಳಲ್ಲಿ ಸಿಬ್ಬಂದಿಗಳು ಹುಟ್ಟುಹಬ್ಬ ಆಚರಿಸಿಕೊ ಳ್ಳುವಂತಿಲ್ಲ.ಶಾಲಾ ಶಿಕ್ಷಕಿಯರೇ ಈ ರೀತಿ ಮಾಡಿದ್ರೆ ಮಕ್ಕಳ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಎಂದು ಸರ್ಕಾರ ಈ ನಿಯಮ ರೂಪಿಸಿತ್ತು
ಈ ಹಿನ್ನೆಲೆಯಲ್ಲಿ ಶಿಕ್ಷಕಿಯನ್ನು ಅಮಾನತು ಮಾಡಬೇಕು ಎಂದು ಶಾಲಾ ಎಸ್ಡಿಎಂಸಿ ಸದಸ್ಯರು ಒತ್ತಾಯಿಸುತ್ತಿದ್ದಾರೆ ಈಗ ಶಿಕ್ಷಕಿ ಕಾಂಬಳೆಗೆ ಅಮಾನತುಗೊಳ್ಳುವ ಭೀತಿ ಎದು ರಾಗಿದೆ ಈಗ ಶಾಲೆಯ ಎಸ್ಡಿಎಂಸಿ ಸದಸ್ಯರು ರಾಯಬಾಗದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶಿಕ್ಷಕಿ ಯನ್ನು ಅಮಾನತು ಮಾಡಬೇಕು ಎಂದು ಮನವಿ ಕೂಡ ಸಲ್ಲಿಸಿದ್ದು ಇನ್ನೂ ಈ ಒಂದು ವಿಚಾರ ಕುರಿತಂತೆ ಇದೇನು ದೊಡ್ಡ ವಿಚಾರವಲ್ಲ ಎಂದುಕೊಂಡು ಶಿಕ್ಷಕಿಯ ಪರವಾಗಿ ಯಾರೊಬ್ಬರು ಧ್ವನಿ ಎತ್ತುತ್ತಿಲ್ಲ
ಸುದ್ದಿ ಸಂತೆ ನ್ಯೂಸ್ ಚಿಕ್ಕೋಡಿ.