ಬೆಂಗಳೂರು –
ಹೌದು ರಾಜ್ಯದ ಸರ್ಕಾರಿ ನೌಕರರಿಗೆ ಈಗಾಗಲೇ 6ನೇ ವೇತನ ಆಯೋಗದ ಅವಧಿ ಮುಕ್ತಾಯ ಗೊಂಡ ಹಿನ್ನಲೆಯಲ್ಲಿ ಸಧ್ಯ ಹೊಸದಾಗಿ ವೇತನ ಪರಿಷ್ಖ್ರರಣೆಗಾಗಿ 7ನೇ ವೇತನ ಆಯೋಗ ಸಮಿತಿ ಗಾಗಿ ಈಗಾಗಲೇ ರಾಜ್ಯ ಸರ್ಕಾರವು ಅಧಿಕೃತ ವಾಗಿ ಆದೇಶವನ್ನು ಹೊರಡಿಸಿದ ಬೆನ್ನಲ್ಲೇ ಡಾ ಸುಧಾಕರ್ ರಾವ್ ನೇತ್ರತ್ವದಲ್ಲಿನ ಈ ಒಂದು ಸಮಿತಿ ಈಗಾಗಲೇ ಮುಖ್ಯಮಂತ್ರಿ ಮತ್ತು ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳೊಂ ದಿಗೆ ಸಭೆಯನ್ನು ಮಾಡಿದ್ದು ನಂತರ ತಮಗೆ ಬೇಕಾದ ದಾಖಲೆಗಳನ್ನು ಕಲೆಹಾಕಿ ವರದಿ ಸಿದ್ದತೆಗೆ ಬೇಕಾದ ಇನ್ನೂ ಕೆಲವೊಂದಿಷ್ಟು ಮಹತ್ವದ ಮಾಹಿತಿಗಳನ್ನು ಈ ಒಂದು ಸಮಿತಿ ಶೇಖರಣೆ ಮಾಡಿಕೊಳ್ಳುತ್ತಿದ್ದು
ಇದರ ನಡುವೆ ಈಗ ರಾಜ್ಯ ಸರ್ಕಾರ ಈ ಒಂದು 7ನೇ ವೇತನ ಆಯೋಗದ ಸಮಿತಿಗೆ ಅಧಿಕೃತ ವಾಗಿ ಸರ್ಕಾರದಿಂದ ಕಚೇರಿಯನ್ನು ನೀಡಿದೆ. ಹೌದು ರಾಜ್ಯ ಸರ್ಕರವು 7ನೇ ವೇತನ ಸಮಿತಿ ರಚನೆ ಕುರಿತಂತೆ ಅಧಿಕೃತವಾದ ಆದೇಶವನ್ನು ಮಾಡಿದ ಬೆನ್ನಲ್ಲೇ ಈ ಒಂದು ಸಮಿತಿಗೆ ಬೇಕಾದ ಕಚೇರಿಯನ್ನು ಬೆಂಗಳೂರಿನ ಔಷಧ ನಿಯಂತ್ರಣ ಕಚೇರಿ ಯಲ್ಲಿ ನೀಡಿದೆ.ನಗರದ ಸಿಐಡಿ ಕಚೇರಿ ಬಳಿಯ ಪ್ಯಾಲೇಸ್ ರೋಡ್
ಚಾಲುಕ್ಯ ಸರ್ಕಲ್ ಬಳಿ ಸರ್ಕಾರವು ಅಧಿಕೃತ ವಾಗಿ ಕಚೇರಿಯನ್ನು ನೀಡಿದ್ದು ಇನ್ನೂ ಇದಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಕೂಡಾ ರಾಜ್ಯ ಸರ್ಕಾರ ಒದಗಿಸಿದ್ದು ಇನ್ನೂ ಮುಂದೆ ಈ ಒಂದು ವೇತನ ಸಮಿತಿಯು ತನ್ನ ಕಾರ್ಯ ಚಟುವಟಿಕೆಗ ಳನ್ನು ಮತ್ತಷ್ಟು ತೀವ್ರಗೊಳಿಸಲಿದ್ದು ಚುರುಕುಗೊ ಳ್ಳಲಿವೆ.
ಸುದ್ದಿ ಸಂತೆ ನ್ಯೂಸ್……