ದಾವಣಗೆರೆ –
ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ದಾವಣಗೆರೆಯಲ್ಲಿ ನಡೆಯಲಿವೆ.ಈ ಕುರಿತು ಸಂಘ ಸಕಲ ಸಿದ್ಧತೆ ನಡೆಸಿದೆ ದಾವಣಗೆರೆ ಜಿಲ್ಲಾಧ್ಯಕ್ಷ ಕೆ.ಮಂಜುನಾಥ್ ತಿಳಿಸಿದ್ದಾರೆ.ಅಕ್ಟೋಬರ್ 21,22,23 ಮೂರು ದಿನಗಳ ಕಾಲ ನಡೆಯಲಿದ್ದು ಈ ಹಿಂದೆ ಚಿತ್ರದು ರ್ಗದಲ್ಲಿ ನಡೆದ ಜಿಲ್ಲಾ ಮಟ್ಟದಲ್ಲಿ ನಡೆದ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಗಳಲ್ಲಿ ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಎಲ್ಲಾ ಕ್ರೀಡಾಪಟುಗಳು ಪೂರ್ವತಯಾರಿ ಮಾಡಿ ಕೊಳ್ಳಬೇಕಿದೆ ಎಂದರು.
ಇನ್ನೂ ಪ್ರಮುಖವಾಗಿ ಈ ಒಂದು ಕ್ರೀಡಾಕೂಟದಲ್ಲಿ ಭಾಗವಹಿಸಿ ಹೆಚ್ಚಿನ ಪದಕಗಳನ್ನು ತರುವ ಮೂಲಕ ನೌಕರರು ಆಯಾ ಜಿಲ್ಲೆಗೆ ಕೀರ್ತಿ ತರಬೇಕಿದೆ. ಇನ್ನೂ ಈ ಒಂದು ಸಮಯ ದಲ್ಲಿ ಪ್ರಧಾನ ಕಾರ್ಯದರ್ಶಿ ಜಿ.ಆರ್.ಪ್ರದೀಪ್ ಕುಮಾರ್, ರಾಜ್ಯ ಪರಿಷತ್ ಸದಸ್ಯ ತಿಮ್ಮಾರೆಡ್ಡಿ, ಖಜಾಂಚಿ ವೀರೇಶ್ ಕ್ರೀಡಾಪ ಟುಗಳಿಗೆ ಶುಭ ಹಾರಿಸಿದರು.