ಬೆಂಗಳೂರು –
ಹೊಸ ಪಿಂಚಣಿ ವಿರುದ್ದ ಬೆಂಗಳೂರಿನಲ್ಲಿ ಮಾಡು ಇಲ್ಲವೇ ಮಡಿ ಹೋರಾಟವನ್ನು ಮಾಡುತ್ತಿರುವ ರಾಜ್ಯದ ಎನ್ ಪಿಎಸ್ ನೌಕರರ ಹೋರಾಟ ಮುಂದುವರೆದಿದೆ.ಕಳೆದ 8 ದಿನಗ ಳಿಂದ ಈ ಒಂದು ಹೋರಾಟವು ನಗರದ ಪ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿದ್ದು ಹಗಲು ರಾತ್ರಿ ಎನ್ನದೇ ನಿರಂತರವಾಗಿ ನಡೆಯುತ್ತಿರುವ ಈ ಒಂದು ಹೋರಾಟದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಅಪಾರ ಸಂಖ್ಯೆಯಲ್ಲಿ ಎನ್ ಪಿಎಸ್ ನೌಕರರು ಪಾಲ್ಗೊಂಡು ಬೇಡಿಕೆಗಳಿಗಾಗಿ ಪಟ್ಟು ಹಿಡಿದು ಹೋರಾಟವನ್ನು
ಇನ್ನೂ ನೌಕರರ ಈ ಒಂದು ಹೋರಾಟಕ್ಕೆ ಕಾಂಗ್ರೇಸ್ ಪಕ್ಷದ ನಾಯಕರು ಮಾಜಿ ಉಪ ಮುಖ್ಯಮಂತ್ರಿ ಜಿ ಪರಮೇಶ್ವರ ಅವರು ಬೆಂಬಲ ವನ್ನು ನೀಡಿದ್ದಾರೆ.ಪ್ರೀಡಂ ಪಾರ್ಕ್ ಗೆ ತೆರಳಿ ನೌಕರರೊಂದಿಗೆ ಕಲ ಸಮಯ ಕಾಲವನ್ನು ಕಳೆದು ಸಮಸ್ಯೆಯನ್ನು ಆಲಿಸಿ ಚರ್ಚೆಯನ್ನು ಮಾಡಿದರು.
ಇದೇ ವೇಳೆ ಹೋರಾಟ ನಿರತ ನೌಕರರನ್ನು ಉದ್ದೇಶಿಸಿ ಮಾತನಾಡಿದ ಪರವೇಶ್ವರ ಅವರು ನಮ್ಮ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದಿರುವ ದೇಶದ ಹಲವು ರಾಜ್ಯಗಳಲ್ಲಿ ಈ ಒಂದು ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ಮಾಡಲಾ ಗಿದ್ದು ಹೀಗಾಗಿ ನಮ್ಮ ರಾಜ್ಯದಲ್ಲೂ ಕೂಡಾ ಕಾಂಗ್ರೇಸ್ ಪಕ್ಷವು ಅಧಿಕಾರಕ್ಕೆ ಬಂದರೆ ಈ ಒಂದು ಬೇಡಿಕೆಯನ್ನು ಈಡೇರಿಸೊವುದಾಗಿ ಹೇಳಿದರು.
ಈ ಮೂಲಕ ಪ್ರತಿಭಟನಾ ನಿರತ ನೌಕರರ ಹೋರಾಟಕ್ಕೆ ಪಕ್ಷದ ಪರವಾಗಿ ವಯಕ್ತಿಕವಾಗಿ ಬೆಂಬಲವನ್ನು ನೀಡಿ ಶಕ್ತಿಯನ್ನು ತುಂಬಿದರು. ಇದೇ ವೇಳೆ ಪ್ರತಿಭಟನಾ ನಿರತ ನೌಕರರು ಜಿ ಪರಮೇಶ್ವರ ಅವರಿಗೆ ಮನವಿಯನ್ನು ಸಲ್ಲಿಸಿ ದರು.
ನಿಮ್ಮ ಅಹವಾಲು ತಿಳಿದುಕೊಂಡು ಪಕ್ಷದ ಹೈ ಕಮಾಂಡ್ ಜೊತೆ ಮಾತನಾಡುತ್ತನೆ ಹಿಮಾಚಲ ಪ್ರದೇಶದ ನೌಕರರ ಜೊತೆ ಅಲ್ಲಿರುವ ನಾಯಕರು ಇರುವ ಹಾಗೆ ನೀವು ಕರ್ನಾಟಕದ ನೌಕರರ ಜೊತೆ ಇರಲು ಹೈ ಕಮಾಂಡ್ ಸೂಚಿಸಿದ್ದು ನಾವೆಲ್ಲರೂ ಸೇರಿ ಭರವಸೆ ಈಡೇರಿಸುವುದಾಗಿ ತಿಳಿಸಿದರು.ಅಲ್ಲದೇ ಪ್ರಣಾಳಿಕೆಯಲ್ಲಿ ನಿಮ್ಮ ಬೇಡಿಕೆ ಇರುವದಾಗಿ ತಿಳಿಸಿದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..