ತುಮಕೂರು –
ಸರವನ್ನು ಕದ್ದು ಪರಾರಿಯಾಗುತ್ತಿದ್ದ ಕಳ್ಳನನ್ನು ಹಿಡಿದ ಸಾರ್ವಜನಿಕರು ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ.ಮಧುಗಿರಿ ಪಟ್ಟಣದ ಕೆ.ಆರ್.ಬಡಾವಣೆಯಲ್ಲಿ ಈ ಒಂದು ಘಟನೆ ನಡೆದಿದೆ.
ಹೌದು ಅಂಜಿನಮ್ಮ ಎಂಬ ಮಹಿಳೆಯು ಹೂವನ್ನು ಮಾರಿಕೊಂಡು ಹೋಗುತ್ತಿದ್ದ 40 ಗ್ರಾಂ ಬಂಗಾರದ ಸರವನ್ನು ಕಸಿದುಕೊಂಡು ಹೋಗುತ್ತಿದ್ದನು ಕಳ್ಳ.
ಅದನ್ನು ಗಮನಿಸಿದ ಸಾರ್ವಜನಿಕರು ಕಳ್ಳನನ್ನ ಹಿಡಿದು ಸಖತ್ ಗೂಸಾ ಕೊಟ್ಟಿದ್ದಾರೆ.ಆಂಧ್ರಪ್ರದೇಶ ಮೂಲದ ನಾಗ ಅಲಿಯಾಸ್ ನಾಗಯ್ಯ ಬಂಧಿತ ಆರೋಪಿಯಾಗಿದ್ದಾನೆ.
ಕಳ್ಳನನ್ನು ಹಿಡಿದು ಮಧುಗಿರಿ ಪೊಲೀಸರಿಗೆ ಒಪ್ಪಿಸಿ ದ್ದಾರೆ ಸಾರ್ವಜನಿಕರು.ಮಧುಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.