This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State News

ಶಿಕ್ಷಕನನ್ನು ಹಿಗ್ಗಾ ಮುಗ್ಗಾ ಥಳಿಸಿದ ಪುಂಡರು – ಬಸ್ ನಿಂದ ಕೆಳಗೆ ಇಳಿಸಿಕೊಂಡು ಮನಬಂದಂತೆ ಥಳಿತ – ಹೇಳೊರಿಲ್ಲ ಕೇಳೊರಿಲ್ಲ ದಂತಾಗಿದೆ…..

WhatsApp Group Join Now
Telegram Group Join Now

ಚಿಕ್ಕಬಳ್ಳಾಪುರ –

ಕ್ಷುಲ್ಲಕ ಕಾರಣಕ್ಕಾಗಿ ಶಿಕ್ಷಕ ಹಾಗೂ ಆತನ ಸಹೋದರನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಚಿಕ್ಕ ಬಳ್ಳಾಪುರದಲ್ಲಿ ನಡೆದಿದೆ.ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಮಾರಗಾನಕುಂಟೆ ಗ್ರಾಮ ದಲ್ಲಿ ಈ ಒಂದು ಘಟನೆ ನಡೆದಿದೆ.

ಶಿಕ್ಷಕನ ಮೇಲೆ ದುಷ್ಕೃತ್ಯವನ್ನು ಮರೆದಿದ್ದಾರೆ ಪುಂಡರು.ಮಾರಗಾನಕುಂಟೆ ಗ್ರಾಮದಲ್ಲಿ ಅಟ್ಟಾಡಿಸಿ ಹೊಡೆದಿದ್ದಾರೆ ದುರುಳರು. ಚಿಕ್ಕಬಳ್ಳಾ ಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕಿನ ಮಾರಗಾನ ಕುಂಟೆ ಗ್ರಾಮದಲ್ಲಿ ಈ ಒಂದು ಕೃತ್ಯವನ್ನು ಮಾಡಲಾಗಿದೆ.

ಶಿಕ್ಷಕ ರಾಜಕುಮಾರ್ ಹಾಗೂ ಆತನ ಅಣ್ಣ ಶ್ರೀನಿವಾಸ್ ಮೇಲೆ ಮನಸೋಯಿಚ್ಚೆ ಥಳಿಸಿದ್ದಾರೆ ಪುಂಡರು.ಬಸ್ಸಿನಲ್ಲಿ ಕಾಲು ತಾಕಿದ್ದಕ್ಕೆ ಶುರುವಾದ ಈ ಒಂದು ಗಲಾಟೆ ದೊಡ್ಡ ಪ್ರಮಾಣದಲ್ಲಿ ನಡೆದಿದೆ. ಆಕಸ್ಮಿಕವಾಗಿ ವಿದ್ಯಾರ್ಥಿಗೆ ಕಾಲು ತಾಕಿದ್ದಕ್ಕೆ ಕ್ಷಮೆ ಯನ್ನು ಶಿಕ್ಷಕ ಕೇಳಿದ್ದಾನೆ ಆದರೂ ಕೇಳದ ಪುಂಡರು ಹೊರಟಿದ್ದ ಬಸ್ ನ್ನು ನಿಲ್ಲಿಸಿ ಶಿಕ್ಷಕ ರಾಜಕುಮಾರ್ ಮತ್ತು ಆತನ ಸಹೋದರನನ್ನು ಮನಸೋ ಇಚ್ಚೆ ಥಳಿಸಿದ್ದಾರೆ.

ಕ್ಷಮೆ ಕೇಳಿದ್ದರೂ ಸುಮ್ಮನಾಗದೆ ಬಸ್ಸಿನಲ್ಲೇ ಹಿಗ್ಗಾಮುಗ್ಗಾ ಥಳಿಸಿ ನಂತರ ಬಸ್ ನಿಂದ ಕೆಳಗೆ ಇಳಿಸಿ ರಸ್ತೆಯಲ್ಲಿ ಉಳ್ಳಾಡಿಸಿ ಥಳಿಸಿದ್ದಾರೆ ಪುಂಡ ವಿದ್ಯಾರ್ಥಿಗಳು.ಇದನ್ನು ನೋಡುತ್ತಿದ್ದರೆ ರಾಜ್ಯದಲ್ಲಿ ಇಂಥವರಿಗೆ ಯಾರು ಹೇಳೊರಿಲ್ಲ ಕೇಳೊರಿಲ್ವಾ ಎಂಬ ಅನುಮಾನ ಕಾಡುತ್ತಿದ್ದು ದುರಂತವೇ ಸರಿ.


Google News

 

 

WhatsApp Group Join Now
Telegram Group Join Now
Suddi Sante Desk