ಬೆಂಗಳೂರು –
ಶಿಕ್ಷಕರ ವರ್ಗಾವಣೆ ಕುರಿತು ಇತ್ತೀಚಿಗೆ ಅಷ್ಟೇ ವಿಧಾನ ಸಭೆ ಯಲ್ಲಿ ಅನುಮೋದನೆ ಪಡೆದು ರಾಜ್ಯಪಾಲರ ಒಪ್ಪಿಗೆಗಾಗಿ ಕಳಿಸಲಾಗಿದ್ದ ಶಿಕ್ಷಕರ ವರ್ಗಾವಣೆ ತಿದ್ದುಪಡಿ ಕಾಯ್ದಿ ಗೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ.
ಹೌದು ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು ಶಿಕ್ಷಕರ ವರ್ಗಾವಣೆ ನಿಯಂತ್ರಣ ತಿದ್ದುಪಡಿ ವಿಧೇಯಕ 2021 ಇದಕ್ಕೆ ಅಕ್ಟೋಬರ್ 1 ರಂದು ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ.ಇಂದು ಈ ಒಂದು ಕುರಿತು ರಾಜ್ಯಪತ್ರವು ಪ್ರಕಟಗೊಂಡಿದೆ.
ಇನ್ನಾದರೂ ಅವೈಜ್ಞಾನಿಕ ವಾಗಿರುವ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಸರಳವಾಗಿ ಆಗಿ ವರ್ಗಾವಣೆಗೆ ಸಿಗದೇ ಕಂಗಾ ಲಾಗಿರುವ ರಾಜ್ಯದ ಶಿಕ್ಷಕರ ಕಷ್ಟ ಪರಿಹಾರ ಆಗುತ್ತದೆನಾ ಎಂಬುದನ್ನು ಕಾದು ನೋಡಬೇಕು