ಧಾರವಾಡ –
ಧಾರವಾಡ ದಲ್ಲಿ 3.75 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ರಸ್ತೆಗಳ ಭೂಮಿ ಪೂಜೆಗೆ ಕೇಂದ್ರ ಸಂಸದೀಯ ಹಾಗೂ ಗಣಿ ಮತ್ತು ಕಲ್ಲಿದ್ದಲು ಸಚಿವ ರಾದ ಪ್ರಲ್ಹಾದ ಜೋಶಿಯವರು ನೆರವೇರಿಸಿದರು
ಅಭಿವೃದ್ಧಿಯತ್ತ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ರಸ್ತೆಗಳು ಈ ಕೆಳಗಿನಂತಿವೆ
ಧಾರವಾಡ ವಾರ್ಡ್ 16 ರಲ್ಲಿ ಇಂದು
- ಪಾಲನಕರ್ ಚಾಳ್ ನಲ್ಲಿ ಸಿಸಿ ರಸ್ತೆಯನ್ನು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸುವ ಕಾಮಗಾರಿ
- ಸನ್ಮತಿ ರಸ್ತೆಯನ್ನು 1.50 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸುವ ಕಾಮಗಾರಿ
- ರಾಮನಗರದ ಉಪರಸ್ತೆಯನ್ನು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸುವ ಕಾಮಗಾರಿ
- ಕೆಂಪಗೇರಿ ರಸ್ತೆಯನ್ನು 75 ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸುವ ಕಾಮಗಾರಿ
- ವಾರ್ಡ್ 15 ಕಾಕಾರಗಲ್ಲಿಯಲ್ಲಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿ
ಈ ಎಲ್ಲ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ನೆರವೇರಿಸಿ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಶಾಸಕರಾದ ಅರವಿಂದ್ ಬೆಲ್ಲದ್, ಪಾಲಿಕೆ ಸದಸ್ಯರಾದ ವಿಜಯಾನಂದ ಶೆಟ್ಟಿ, ಈರೇಶ್ ಅಂಚಟಗೇರಿ,ಶಿವು ಹಿರೇಮಠ,ರಾಜೇಶ್ವರಿ ಸಾಲಗಟ್ಟಿ,ಪ್ರಮೋದ ಕಾರಕುನ,ಪಕ್ಷದ ಮುಖಂ ಡರು, ಕಾರ್ಯಕರ್ತರು ಹಾಗೂ ಪಾಲಿಕೆ ಸದಸ್ಯರು, ಇನ್ನಿತರೆ ಪ್ರಮುಖರು ಉಪಸ್ಥಿತರಿದ್ದರು.