ಹುಬ್ಬಳ್ಳಿ –
ವಾಣಿಜ್ಯ ನಗರಿ ಹುಬ್ಬಳ್ಳಿ ಗೆ ಒಂದಿಲ್ಲೊಂದು ಹೊಸ ಹೊಸ ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುತ್ತಿದ್ದು ಇದರಲ್ಲಿ ಹುಬ್ಬಳ್ಳಿಯ ಹೊರವಲಯದ ಗಬ್ಬೂರಿನ ಬಳಿ ಇರುವ ಸುಂದರವಾಗಿ ಕಾಣುತ್ತಿರುವ ಬೈಪಾಸ್ ರಸ್ತೆಯು ಒಂದಾಗಿದ್ದು ಈ ಒಂದು ಬೈಪಾಸ್ ರಸ್ತೆಯಿಂದಾಗಿ ಹುಬ್ಬಳ್ಳಿಯ ಒಳಗಡೆ ದಟ್ಟ ಸಂಚಾರದ ನಡುವೆ ಪ್ರಯಾಣ ಮಾಡಿ ನಂತರ ಹೊರಗಡೆ ಹೋಗುವ ಪರದಾಟ ತಪ್ಪಿದಂತಾ ಗಿದ್ದು
ಈ ಒಂದು ಮಹತ್ವದ ಯೋಜನೆಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ನಿರಂತರ ಪ್ರಯತ್ನದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸಾರಿಗೆ ಸಚಿವ ನಿತೀನ್ ಗಡ್ಕರಿ ಅವರು ನಗರಕ್ಕೆ ನೀಡಿದ್ದು ಈ ಒಂದು ಯೋಜನೆಯಿಂ ದಾಗಿ ನಿರ್ಮಾಣಗೊಂಡಿರುವ ವರ್ತಲ ರಸ್ತೆಯ ಪೊಟೊವೊಂದನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ತಮ್ಮ ಸಾಮಾಜಿಕ ಜಾಲ ತಾಣ ಗಳಲ್ಲಿ ವಿಭಿನ್ನವಾಗಿ ಹಂಚಿಕೊಂಡಿದ್ದಾರೆ.
ಹೌದು ಹೂವಿನ ಬಳ್ಳಿ- ಹುಬ್ಬಳ್ಳಿಯ ಗಬ್ಬೂರಿನ ಹೊರವಲಯದ ಹತ್ತಿರ ಅರಳಿದ ಬೈಪಾಸ್ ವರ್ತುಲ ರಸ್ತೆಯ ಪಕ್ಷಿನೋಟ ಇದಾಗಿದ್ದು ಅಭಿವೃದ್ಧಿ ಪಥದಲ್ಲಿ ಅರಳುತ್ತಿರುವ ನಮ್ಮ ಹುಬ್ಬಳ್ಳಿಗೆ ಈ ಯೋಜನೆಗಳನ್ನು ನೀಡಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಾರಿಗೆ ಸಚಿವರಾದ ನಿತೀನ್ ಗಡ್ಕರಿ ಅವರಿಗೆ ಧನ್ಯವಾದಗಳನ್ನು ಹೇಳಿದ್ದಾರೆ.
ಇದರೊಂದಿಗೆ ಕೇಂದ್ರ ಸಚಿವರು ನಗರದಲ್ಲಿನ ಸುಂದರವಾದ ಚಿತ್ರವೊಂದನ್ನು ಹಂಚಿಕೊಂಡು ಜನತೆಗೆ ಅಭಿವೃದ್ದಿಯ ಕುರಿತಂತೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ.