ಹುಬ್ಬಳ್ಳಿ –
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪುತ್ರಿಯ ವಿವಾಹ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ನಡೆಯಿತು.ನಗರದ ಡೇನಿಸನ್ ಹೊಟೇಲ್ ನಲ್ಲಿ ಪುತ್ರಿಯ ವಿವಾಹ ಮಹೋತ್ಸವ ಅದ್ದೂರಿಯಾಗಿ ನಡೆಯಿತು.ಹೌದು ಹುಬ್ಬಳ್ಳಿಯ ಖಾಸಗಿ ಹೋಟೆಲ್ ಡೇನಿಸನ್ ನಲ್ಲಿ ಈ ಒಂದು ಮದುವೆ ಸಮಾರಂಭ ಅದ್ದೂರಿಯಾಗಿ ನಡೆಯುತ್ತಿದೆ.
ಇನ್ನೂ ಗೋಧೂಳಿ ಮುಹೂರ್ತದಲ್ಲಿ ಹಸೆಮಣೆ ಯನ್ನು ದಂಪತಿಗಳು ಏರಿದ್ದಾರೆ. ಕೇಂದ್ರದ ಸಚಿವರು ಧಾರವಾಡ ಜಿಲ್ಲೆಯ ಸಂಸದರಾಗಿರುವ ಪ್ರಹ್ಲಾದ್ ಜೋಶಿ ಅವರ ಮೊದಲ ಪುತ್ರಿ ಅರ್ಪಿತಾ ಹಾಗೂ ಹೃಷಿಕೇಶ ನವದಂಪತಿಗಳಾಗಿ ಹಸೇ ಮಣೆಯನ್ನು ಏರಿ ಹೊಸ ಬಾಳಿಗೆ ಬದುಕಿಗೆ ಕಾಲಿಟ್ಟಿದ್ದಾರೆ.
ಇನ್ನೂ ಅದ್ದೂರಿಯಾದ ಈ ಒಂದು ಕಾರ್ಯಕ್ರಮ ದಲ್ಲಿ ಜೋಶಿ ಅವರ ಪುತ್ರಿ ಅರ್ಪಿತಾ ಮತ್ತು ಹೃಷಿಕೇಶ ಮದುವೆ ಸಭಾರಂಭಕ್ಕೆ ಗಣ್ಯಾತಿ ಗಣ್ಯರು ಆಗಮಿಸಿದ್ದಾರೆ.ರಾಜ್ಯದ ರಾಜ್ಯಪಾಲರಾದ ಥಾವರ ಚೆಂದ್ ಗೆಹ್ಲೋಟ್,ಕೇಂದ್ರ ಸಚಿವ ಮೇಘವಾಲ್, ಇವರೊಂದಿಗೆ ಸಚಿವರಾದ ಆರ್ ಅಶೋಕ ಸೇರಿದಂತೆ ಹಲವು ಗಣ್ಯರು ರಾಜ್ಯದ ಬಿಜೆಪಿ ನಾಯಕರು ಭಾಗಿಯಾಗಿ ನೂತನ ದಂಪತಿಗಳಿಗೆ ಶುಭ ಹಾರೈಸಿದರು.
ವಧು ವರರನ್ನು ಹರಿಸಿದ ಗಣ್ಯರು ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಮೆರಗು ನೀಡಿದರು.ಇಂದು ಮದುವೆ ಸಮಾರಂಭ ನಡೆದಿದ್ದು ನಾಳೆ ಆರತಕ್ಷತೆ ಸಮಾರಂಭ ನಡೆಯಲಿದೆ.
ಸಂಜೆ ನಡೆಯಲಿರುವ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಕೇಂದ್ರದ ರಾಜ್ಯದ ನಾಯಕರು ಗಣ್ಯರು ಪಾಲ್ಗೊಳ್ಳಲಿದ್ದಾರೆ.