ಧಾರವಾಡ –
ಯೊಗೀಶಗೌಡ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಭವಿಷ್ಯ ಬುಧವಾರ ನಿರ್ಧಾರಲಾಗಲಿದೆ. ಜಾಮೀನಿಗಾಗಿ ಈಗಾಗಲೇ ಇವರು ಅರ್ಜಿಯನ್ನು ಸಲ್ಲಿಸಿದ್ದು ಇದರ ಬೆನ್ನಲ್ಲೇ ಈ ಒಂದು ಅರ್ಜಿಯನ್ನು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆ ಮಾಡುವಂತೆ ವಿನಯ ಕುಲಕರ್ಣಿ ಪರ ವಕೀಲರು ಕೇಳಿಕೊಂಡಿದ್ದರು. ಇವರ ಮನವಿಗೆ ಸ್ಪಂದಿಸಿದ ನ್ಯಾಯಾಲಾಯ ಈ ಒಂದು ಪ್ರಕರಣವನ್ನು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿದ್ದು ಈಗಾಗಲೇ ಈ ಕುರಿತಂತೆ ಸಿಬಿಐ ಮತ್ತು ಮಾಜಿ ಸಚಿವ ವಿನಯ ಕುಲಕರ್ಣಿ ಪರ ವಕೀಲರಿಂದ ವಾದ ಪ್ರತಿವಾದವನ್ನು ಆಲಿಸಿ ರುವ ನ್ಯಾಯಾವಾಧಿಗಳು ನಾಳೆ ತೀರ್ಪನ್ನು ಪ್ರಕಟ ಮಾಡಲಿದ್ದಾರೆ. ಕೆಳ ನ್ಯಾಯಾಲಯದಲ್ಲಿ ಈಗಾಗಲೇ ಜಾಮೀನು ಅರ್ಜಿ ವಜಾಗೊಂಡಿದ್ದು ನಾಳೆ ಮಾಜಿ ಸಚಿವರ ಭವಿಷ್ಯ ಏನಾಗಲಿದೆ ಎಂಬ ಕುರಿತಂತೆ ಜನಪ್ರತಿನಿಧಿಗಳ ಕೋರ್ಟ್ ನ ತೀರ್ಪಿನಿಂದ ಉತ್ತರ ಸಿಗಲಿದೆ.