ಬೆಂಗಳೂರು –
ರಾಜ್ಯದ ಸರ್ಕಾರಿ ನೌಕರರ ವೇತನ ಪರಿಷ್ಕ್ರರ ಣೆಗಾಗಿ ಈಗಾಗಲೇ ರಾಜ್ಯ ಸರ್ಕಾರವು 7ನೇ ವೇತನ ಆಯೋಗವನ್ನು ರಚನೆ ಮಾಡಿದೆ.ಈ ಕುರಿತಂತೆ ಸರ್ಕಾರವು ಕೂಡಾ ಕೆಲವೊಂದಿಷ್ಟು ಅಧಿಕೃತವಾದ ಆದೇಶವನ್ನು ಮಾಡಿದ್ದು ಹೀಗಾಗಿ ಇತ್ತ ಸಮಿತಿಯೂ ಕೂಡಾ ಕಾರ್ಯ ಚಟುವಟಿಕೆ ಗಳನ್ನು ಮಾಡುತ್ತಿದೆ.
ಇದೇಲ್ಲದರ ನಡುವೆ ಈ ಒಂದು ವೇತನ ಆಯೋಗದಿಂದ ಯಾರಿಗೆ ಎಷ್ಟೇಷ್ಟು ಲಾಭ ವಾಗಲಿದೆ ಏನೇನು ಅನುಕೂಲವಾಗಲಿ ಎಂಬ ಕುರಿತಂತೆ ನೊಡೊದಾದರೆ ಈ ಒಂದು ಸಮಿತಿ ಯಿಂದಾಗಿ ರಾಜ್ಯದ ನೌಕರರು ಮತ್ತು ಪಿಂಚಣಿ ದಾರರಿಗೆ ಭಾರಿ ಪ್ರಮಾಣದಲ್ಲಿ ಲಾಭವಾಗಲಿದೆ.
ಇದೊಂದು.ಸರ್ಕಾರಿ ನೌಕರರ ಪಾಲಿಗೆ ಭಾರಿ ಸಂತಸದ ಸುದ್ದಿಯಾಗಿದ್ದು ನೌಕರರ ಬಹುದಿನ ಗಳ ಬೇಡಿಕೆಗೆ ಸರಕಾರ ಮನ್ನಣೆ ನೀಡಿದೆ. ವಾಸ್ತವದಲ್ಲಿ ಸರ್ಕಾರ ವೇತನ ಆಯೋಗವನ್ನು ಘೋಷಿಸಿದೆ ನೌಕರರ ವೇತನವನ್ನು ಪರಿಶೀಲಿಸಿ ಸಮಿತಿಯೂ ತನ್ನದೇಯಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಲಿದೆ.
ಇದಕ್ಕಾಗಿ ಸರ್ಕಾರ ಆಯೋಗವನ್ನು ರಚನೆ ಮಾಡಿದ್ದು ಸಮಯವನ್ನು ಕೂಡಾ ನೀಡಿದೆ. ಈ ಆಯೋಗದ ವರದಿಯೂ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾದ ನಂತರ ಇದನ್ನು ಜಾರಿಗೆ ತಂದರೆ ಈ ಒಂದು ಪ್ರಕಾರವಾಗಿ ರಾಜ್ಯದ ನೌಕರರ ವೇತನ ಪರಿಷ್ಕರಣೆಯಾಗಲಿದೆ.ಸರ್ಕಾರದ ಈ ಘೋಷ ಣೆಯ ನಂತರ ಲಕ್ಷಾಂತರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಸಂಬಳ ಹೆಚ್ಚಾಗಲಿದೆ
ಸರ್ಕಾರದ ಈ ನಿರ್ಧಾರದ ನಂತರ ರಾಜ್ಯದ ಲಕ್ಷಾಂತರ ನೌಕರರು ಮತ್ತು ಪಿಂಚಣಿದಾರರು ಹೆಚ್ಚಿದ ವೇತನ ಮತ್ತು ಪಿಂಚಣಿಯ ಲಾಭವನ್ನು ಪಡೆಯಲಿದ್ದಾರೆ.ಕರ್ನಾಟಕ ಸರ್ಕಾರ ಈಗಾಗಲೇ ಈ ಆಯೋಗವನ್ನು ರಚಿಸಿದೆ ಎಂಬುದು ಇಲ್ಲಿ ಉಲ್ಲೇಖನೀಯ ಈ ಆಯೋಗದ ಶಿಫಾರಸಿನ ಮೇರೆಗೆ ಮಾತ್ರ ಸರ್ಕಾರವು ರಾಜ್ಯದ ನೌಕರರ ವೇತನ ಮತ್ತು ಪಿಂಚಣಿಯನ್ನು ನಿರ್ಧರಿಸಲಾ ಗುತ್ತದೆ.
ಕರ್ನಾಟಕ ಸರ್ಕಾರದ ಏಳನೇ ವೇತನ ಆಯೋಗ ರಚನೆಯಾದ ನಂತರ ರಾಜ್ಯದ 6 ಲಕ್ಷ ನೌಕರರು ಮತ್ತು ಪಿಂಚಣಿದಾರರಲ್ಲಿ ಭಾರಿ ಸಂತಸದ ವಾತಾವರಣವಿದೆ.ನೌಕರರ ಬಹುದಿನಗಳ ಬೇಡಿಕೆಗೆ ಮನ್ನಣೆ ದೊರೆತಿರುವುದರಿಂದ ವೇತನ ಪಿಂಚಣಿ ಹೆಚ್ಚಳವಾಗಲಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..