ವಾರ್ಡ್ 2ರಲ್ಲಿ ಜೋರಾಗಿದೆ ಬಿಜೆಪಿ ಪಕ್ಷದ ಪ್ರಚಾರ – ಮನೆ ಮನೆಗೆ ತೆರಳಿ ಮತಯಾಚನೆ ಮತದಾರರಿಂದ ಅಭೂತಪೂರ್ವ ಅಭಯ…..

Suddi Sante Desk

ಧಾರವಾಡ –

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ 2 ರಲ್ಲಿ ಬಿಜೆಪಿ ಪಕ್ಷದ ಪ್ರಚಾರ ಜೋರಾ ಗಿದೆ.ಪಕ್ಷದ ಅಭ್ಯರ್ಥಿ ನಿಂಗವ್ವ ಶಂಕರ ಹಾರಿಕೊಪ್ಪ ಪರ ಪ್ರಚಾರ ಬೆಳ್ಳಂ ಬೆಳಿಗ್ಗೆ ಜೋರಾಗಿ ಕಂಡು ಬರುತ್ತಿದೆ.

ವಾರ್ಡ್ ನಲ್ಲಿ ಬಿಜೆಪಿ ಪಕ್ಷದ ಕಾರ್ಯಕ ರ್ತರು ಅಭಿಮಾನಿಗಳು ಆಪ್ತರು ಮಹಿಳೆಯರು ಸೇರಿದಂತೆ ಹಲವರು ಸ್ವಯಂ ಪ್ರೇರಿತವಾಗಿ ಪಾಲ್ಗೊಂಡು ಅಭ್ಯರ್ಥಿ ಶ್ರೀಮತಿ ನಿಂಗವ್ವ ಶಂಕರ ಹಾರಿಕೊಪ್ಪ ಪರ ಅಬ್ಬರದ ಪ್ರಚಾರವನ್ನು ಮಾಡುತ್ತಿದ್ದಾರೆ.

ವಾರ್ಡ್ ನಂಬರ್ 2 ರಲ್ಲಿ ಪ್ರತಿಯೊಂದು ಮನೆಗೆ ಮನೆಗೆ ತೆರಳಿ ಬಿಡುವಿಲ್ಲದೇ ಪ್ರಚಾರವನ್ನು ಮಾಡುತ್ತಾ ಮತಯಾಚನೆಯನ್ನು ಮಾಡುತ್ತಿದ್ದಾರೆ.

ಪ್ರಮುಖವಾಗಿ ಮತಯಾಚನೆಯ ಸಮಯದಲ್ಲಿ ಈವರೆಗೆ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಅವರ ಅನುದಾನ ರಲ್ಲಿ ಕೈಗೊಂಡಿರುವ ಅಭಿವೃದ್ದಿ ಕೆಲಸ ಕಾರ್ಯಗಳು ಹಾಗೇ ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಬಿಜೆಪಿ ಸರ್ಕಾರದವಿದ್ದು

ಹೀಗಾಗಿ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗೆ ಅವಕಾಶ ನೀಡಿದರೆ ವಾರ್ಡ್ ನಲ್ಲಿ ಅಭಿವೃದ್ದಿಗೆ ಹೆಚ್ಚು ಅನುಕೂಲವಾಗುತ್ತದೆ ಇದರಿಂದ ಇದೊಂದು ಬಾರಿ ಬಿಜೆಪಿ ಗೆ ಮತವನ್ನು ನೀಡುವಂತೆ ಮತದಾರರಲ್ಲಿ ಕೋರಲಾಯಿತು.

ಈಮೂಲಕ ಅಭಿವೃದ್ದಿಗೆ ಹೆಚ್ಚು ಅನುಕೂಲಕವಾಗ ಲಿದ್ದು ಎಂದು ಅಭ್ಯರ್ಥಿ ನಿಂಗವ್ವ ಶಂಕರ ಹಾರಿಕೊಪ್ಪ ಮತದಾರರಲ್ಲಿ ಹೇಳಿದರು. ಇದರೊಂ ದಿಗೆ ವಾರ್ಡ್ 2 ರಲ್ಲಿ ಅಬ್ಬರದ ಪ್ರಚಾರವು ನಡೆಯು ತ್ತಿದ್ದು ಇದರೊಂದಿಗೆ ಮತಯಾಚನೆ ಮಾಡುತ್ತಿದ್ದಾರೆ.

ಪಕ್ಷದ ಅಭ್ಯರ್ಥಿ ಶ್ರೀಮತಿ ನಿಂಗವ್ವ ಶಂಕರ ಹಾರಿಕೊಪ್ಪ ಅವರೊಂದಿಗೆ ಶಶಿಕಲಾ ಚೌಹಾನ್, ಸುರೇಖಾ ಕಿಟದಾಳ,ನಿರ್ಮಲಾ ಮಡಿವಾಳರ ಹೇಮಾವತಿ ಶಾಲಿಯಾನ, ವೆಂಕಟೇಶ ಮನ್ನಿಕೇರಿ, ಮಂಜುನಾಥ ಚೌಹಾನ್ ವಿಠ್ಠಲ ಗುಡುದೂರು ತಬರೇಜ್ ಕಿಲ್ಲೇದಾರ,ತೌಸಿಫ್ ಲಾಲಮೀಯಾ ಸೇರಿದಂತೆ ಹಲವರು ಉಪಸ್ಥಿತರಿದ್ದು ಮತಯಾಚನೆ ಮಾಡಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.