ಧಾರವಾಡ ದಲ್ಲಿ ಇನ್ಸ್ಪೆಕ್ಟರ್ ವಾಹನ ಅಪಘಾತ – ಇನ್ಸ್ಪೆಕ್ಟರ್ ವಿರೇಶ ನಾಯಕ ಗೆ ಗಾಯ…..

Suddi Sante Desk

ಧಾರವಾಡ –

ಬೆಳ್ಳಂ ಬೆಳಿಗ್ಗೆ ಇನ್ಸ್ಪೆಕ್ಟರ್ ಬುಲೇರೊ ವೊಂದು ಅಪಘಾತಕ್ಕಿಡಾದ ಘಟನೆ ಧಾರವಾಡ ದಲ್ಲಿ ನಡೆದಿದೆ.ಹೌದು ನಗರದ ಕೆಎಂಎಫ್ ಬಳಿ ನಡೆದ ಈ ಒಂದು ಘಟನೆಯಲ್ಲಿ ಇನ್ಸ್ಪೆಕ್ಟರ್ ತೀವ್ರವಾಗಿ ಗಾಯಗೊಂಡಿದ್ದಾರೆ.

ಘಟನೆಯಲ್ಲಿ ಸಿಎಆರ್ ಇನ್ಸ್ಪೆಕ್ಟರ್ ವಿರೇಶ ನಾಯಕ ಎಂಬುವವರ ಬುಲೆರೋ ಜಖಂ ಆಗಿದ್ದು ಅವರಿಗೂ ಕೂಡಾ ಸಣ್ಣ ಪುಟ್ಟ ಪ್ರಮಾಣದಲ್ಲಿ ಗಾಯಗಳಾಗಿವೆ.ಇವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕೆಎಂಎಫ್ ವಾಹನ ಅಡ್ಡ ಬಂದ ಪರಿಣಾಮ ಈ ಒಂದು ಅಪಘಾತ ಸಂಭವಿಸಿದೆ.ಕೆಎಂಎಫ್ ಬಳಿಯ ಬಿಆರ್ ಟಿಎಸ್ ರಸ್ತೆಯಲ್ಲಿ ಹೋಗುವಾಗ ನಡೆದಿ ರುವ ಘಟನೆ.

ಇನ್ನೂ ಸುದ್ದಿ ತಿಳಿದ ಧಾರವಾಡ ಸಂಚಾರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.