ಮತಾಂತರ ವಿರುದ್ಧ ನವನಗರದಲ್ಲಿ ಸಿಡಿದೆದ್ದ ಹಿಂದೂ ಸಂಘಟನೆ ಯವರು – ಶಾಸಕ ಅರವಿಂದ ಬೆಲ್ಲದ ನೇತೃತ್ವದಲ್ಲಿ ಹೋರಾಟ

Suddi Sante Desk

ಹುಬ್ಬಳ್ಳಿ –

ಮತಾಂತರ ವಿರುದ್ದ ಹುಬ್ಬಳ್ಳಿಯ ನವನಗರದಲ್ಲಿ ಹಿಂದೂ ಪರ ಸಂಘಟನೆಯ ಮುಖಂಡರು ಕಾರ್ಯಕರ್ತರು ಸಿಡಿ ದೆದ್ದಿದ್ದಾರೆ.ಹೌದು ಇಂದು ಬೆಳಿಗ್ಗೆ ಕ್ರಿಶ್ಚಿಯನ್ ಸಮುದಾಯ ದವರಿಂದ ಮತಾಂತರ ಮಾಡುತ್ತಿರೋದಾಗಿ ಆರೋಪವು ಕೇಳಿ ಬಂದಿತ್ತು.ಈ ಒಂದು ಹಿನ್ನೆಲೆಯಲ್ಲಿ ಶಾಸಕ ಅರವಿಂದ ಬೆಲ್ಲದ ನೇತೃತ್ವದಲ್ಲಿ ಹೋರಾಟವನ್ನು ಮಾಡಲಾಗುತ್ತಿದೆ.

ಕ್ರಿಶ್ಚಿಯನ್ ಸಮುದಾಯದವರಿಂದ ಮತಾಂತರ ಮಾಡುತ್ತಿರೋದಾಗಿ ಆರೋಪ ಹಿನ್ನೆಲೆಯಲ್ಲಿ ಆಕ್ರೋಶ ಬುಗಿಲೆದ್ದಿದೆ.ಹುಬ್ಬಳ್ಳಿಯ ನವನಗರದಲ್ಲಿ ಹಿಂದೂಪರ ಸಂಘಟನೆಯವರಿಂದ ರಸ್ತೆ ತಡೆದು ಪ್ರತಿಭಟನೆ ಮಾಡಲಾ ಯಿತು.ಹುಬ್ಬಳ್ಳಿ ಧಾರವಾಡ ಮುಖ್ಯ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಮುಖಂಡರು.

ಕಳೆದ ಅರ್ಧ ಗಂಟೆಯಿಂದಲೂ ರಸ್ತೆ ತಡೆದು ಬೃಹತ್ ಪ್ರತಿಭಟನೆಯನ್ನು ಮಾಡುತ್ತಿದ್ದಾರೆ.ಹಿಂದೂ ಕಾರ್ಯಕ ರ್ತರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದಾರೆ. ಮತಾಂತರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಕಾರ್ಯಕರ್ತರು ಮುಖಂಡರು

ವಿಶ್ವ ಹಿಂದೂ ಪರಿಷತ್,ಶ್ರೀರಾಮ ಸೇನೆ,ಬಜರಂಗದಳ ಸೇರಿದಂತೆ ಹಲವು ಹಿಂದೂಪರ ಸಂಘಟನೆಗಳ ಕಾರ್ಯ ಕರ್ತರಿಂದ ರಸ್ತೆ ತಡೆದು ಹೋರಾಟವನ್ನು ಮಾಡಲಾಯಿತು ಮತಾಂತರ ಮಾಡುವವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಹಿಂದೂ ಕಾರ್ಯಕರ್ತರು ಇಂದು ಬೆಳಿಗ್ಗೆ ಕ್ರೈಸ್ತ ಭಾಂದವರಿಂದ ಕೆಲ ಜನರನ್ನ ಮತಾಂತರ ಮಾಡಲು ಹೊರಟಿದ್ದಾಗಿ ಆರೋಪಿಸಿ ಮತಾಂದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು ಹಿಂದೂ ಬಾಂಧವರು ಸಂಘಟನೆಯ ಕಾರ್ಯಕರ್ತರು

ಮತಾಂತರ ಮಾಡಲು ಹೊರಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಪಡಿಸುತ್ತಿದ್ದಾರೆ ಕಾರ್ಯಕರ್ತರು ಮುಖಂಡರು.ಹೀಗಾಗಿ ಶಾಸಕ ಅರವಿಂದ ಬೆಲ್ಲದ್ ನೇತೃತ್ವದಲ್ಲಿ ಪ್ರತಿಭಟನೆ ಮುಂದುವರಿದಿದೆ. ಠಾಣೆಗೆ ಮುತ್ತಿಗೆ ಹಾಕಲು ಹೊರಟಿದ್ದಾರೆ ಸ್ಥಳದಲ್ಲಿನ ಪ್ರತಿಭಟನಾಕಾರರು.

ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ ಪೊಲೀಸ್ ಸಿಬ್ಬಂದಿಗಳು.ರಸ್ತೆ ತಡೆಯುಂದಾಗಿ ಕಳೆದ ಅರ್ಧ ಗಂಟೆಯಿಂದಲೂ ಸಂಚಾರ ಅಸ್ತವ್ಯಸ್ತತೆ ಆಗಿದ್ದು ಅತ್ತ ನವನಗರ ಎಪಿಎಂಸಿ ಠಾಣೆಯ ಎದುರು ಪ್ರತಿಭಟನೆಗೆ ಮಾಡತಾ ಇದ್ದಾರೆ ಹಿಂದೂ ಕಾರ್ಯಕರ್ತರು ಮುಖಂಡರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.