ಹಾಸಿಗೆ ಹಿಡಿದ ಶಿಕ್ಷಕ – ನೆರವಿಗೆ ಬಾರದ ಇಲಾಖೆ ಕಣ್ಣೀರಿನಲ್ಲಿ ಕುಟುಂಬ – ಯಾರಿಗೂ ಕೇಳುತ್ತಿಲ್ಲ ಕಾಣುತ್ತಿಲ್ಲ ಮಹಾದೇವ ಮಾಳಗಿ ನೋವು…..

Suddi Sante Desk

ಧಾರವಾಡ –

ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ ಎನ್ನುವಂತಹ ಪರಿಸ್ಥಿತಿ ಧಾರವಾಡದಲ್ಲಿ ಶಿಕ್ಷಕ ರೊಬ್ಬರ ಸ್ಥಿತಿಯಾಗಿದೆ‌.ಹೌದು ನಗರದಲ್ಲಿ ವಾಸವಿ ರುವ ಇಂತಹದೊಂದು ಪರಿಸ್ಥಿತಿ ಒದಗಿ ಬಂದಿದೆ.
ಕಳೆದ ಕೆಲವು ವರ್ಷಗಳಿಂದ ಪಾರ್ಶ್ವವಾಯು ರೋಗದಿಂದ ಬಳಲುತ್ತಿರುವ ಶಿಕ್ಷಕ ಮಹಾದೇವ ಮಾಳಗಿ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ಹಣ ಕಟ್ಟಲಾಗದ ಹೀನಾಯಮಾನ ಸ್ಥಿತಿಗೆ ಸಿಲುಕಿದ್ದಾರೆ.

2016 ರಿಂದ 2021 ರವರೆಗೆ ವೇತನ ಸರಿಯಾಗಿ ಬಾರದೆ ಒದ್ದಾಡುತ್ತಿದ್ದ ಈ ಶಿಕ್ಷಕನ ಮನೆಗೆ ಮಾಜಿ ಶಿಕ್ಷಣ ಸಚಿವರಾಗಿದ್ದ ಸುರೇಶ ಕುಮಾರ್ ಮನೆಗೆ ಭೇಟಿ ನೀಡಿದಾಗ ಯಾವುದೇ ಕಾರಣಕ್ಕಾಗಿ ವೇತನ ತಡೆ ಹಿಡಿಯದಂತೆ ಆದೇಶ ನೀಡಿದರೂ

ಸಚಿವರ ಆದೇಶಕ್ಕೂ ಕ್ಯಾರೇ ಎನ್ನದೇ ಫೈನಾನ್ಸ್ ಡಿಪಾರ್ಟ್ಮೆಂಟ್ ಅಧಿಕಾರಿಗಳು ಇದುವರೆಗೂ ವೇತನ ನೀಡಿಲ್ಲ.ವೇತನ ಬಾರದೇ ಇದ್ದಿದ್ದಕ್ಕೆ ಶಿಕ್ಷಕ ನ ಕುಟುಂಬ ಒದ್ದಾಡುತ್ತಿದ್ದೂ ಶೀಘ್ರವೇ ಬಾಕಿ ವೇತನ ಬಿಡುಗಡೆ ಮಾಡಬೇಕೆಂದು ಕುಟುಂಬಸ್ಥರು ಅಳಲು ತೋಡಿಕೊಳ್ಳುತ್ತಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.