ಭಾರತ್ ಬಂದ್ ಗೆ ಧಾರವಾಡದಲ್ಲಿ ಬಂದ್ ಗೆ ಬೆಂಬಲ – ನಗರದಲ್ಲಿ ಪೂರ್ವಭಾವಿ ಸಭೆ…..

Suddi Sante Desk

ಧಾರವಾಡ –

ಸೆಪ್ಟೆಂಬರ್ 27 ರಂದು ಭಾರತ ಬಂದ್ ಗೆ ಕರೆ ನೀಡಲಾಗಿದ್ದು ಈ ಒಂದು ಬಂದ್ ಗೆ ಧಾರವಾಡ ಜಿಲ್ಲೆಯಲ್ಲೂ ಬೆಂಬಲ ಕಂಡು ಬಂದಿದೆ.

ಹೌದು ಈ ಒಂದು ಭಾರತ ಬಂದ್ ಗೆ ನಗರದಲ್ಲೂ ಬೆಂಬಲವನ್ನು ನೀಡಲು ತೀರ್ಮಾನವನ್ನು ತಗೆದು ಕೊಂಡಿದ್ದು ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಬೆಂಬಲವನ್ನು ನೀಡಲಾ ಗುತ್ತಿದೆ.ಕೇಂದ್ರ ಸರ್ಕಾರದ ಕಾಯ್ದೆಗಳ ವಿರೋಧಿಸಿ ಭಾರತ ಬಂದ್ ಗೆ ಕರೆ ನೀಡಲಾಗಿದ್ದು ಹೀಗಾಗಿ ಧಾರವಾಡದಲ್ಲೂ ಬಂದ್ ಕರೆ ನೀಡಲಾಗುತ್ತಿದೆ

ವಿವಿಧ ಪ್ರಗತಿಪರ ಸಂಘಟನೆಗಳ ಮೂಲಕ ನಗರದಲ್ಲೂ ಕೂಡಾ ಬೃಹತ್ ಪ್ರತಿಭಟನೆ ನಡೆಯ ಲಿದ್ದು ಹೀಗಾಗಿ ಇಂದು ನಗರದಲ್ಲಿ ಪೂರ್ವ ಭಾವಿ ಸಭೆಯನ್ನು ಮಾಡಲಾಯಿತು

ಬೆಳಿಗ್ಗೆ 6 ರಿಂದ ಸಂಜೆಯವರೆಗೆ ಧಾರವಾಡ ಬಂದ್ ಕರೆ ನೀಡಲಾಗಿದೆ.ಮೂರು ಕಾಯಿದೆಗಳ ರದ್ಧತಿಗಾಗಿ ಈ ಒಂದು ಬಂದ್ ನ್ನು ಕರೆಯಲಾಗಿದೆ. ಸಿ.ಎಫ್‌. ಡಿ.ಐ, ರೈತ ಸೇನಾ ಕರ್ನಾಟಕ, ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ.ಆರ್.ಕೆ.ಎಸ್,ಸಿಟಿಜನ್ ಫಾರ್ ಡೆಮಾಕ್ರಸಿ,ಲೀಡ್ ಕರ್ ಸಂಘ ಡಿ.ಎಸ್. ಎಸ್ ಸೇರಿದಂತೆ ಹಲವು ಸಂಘಟನೆ ಬಂದ್ ಗೆ ಬೆಂಬಲವನ್ನು ನೀಡಿವೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.