ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ದಲ್ಲಿ ಅಮೂಲಾಗ್ರ ಬದಲಾವಣೆ CM ಬಸವರಾಜ ಬೊಮ್ಮಾಯಿ – ಹುಬ್ಬಳ್ಳಿಯಲ್ಲಿ ‌ಮಾತು…..

Suddi Sante Desk

ಹುಬ್ಬಳ್ಳಿ –

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ಆಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಹುಬ್ಬಳ್ಳಿ ಯಲ್ಲಿ ಮಾತನಾಡಿದ ಅವರು ಈಗಾಗಲೇ ಮೂರು ವರ್ಷ ವಿವಿಧ ಹಂತದಲ್ಲಿ ಚರ್ಚೆ ಆಗಿದೆ.ಶಿಕ್ಷಣ ತಜ್ಞರು,ಶ್ರೇಷ್ಠ ತಜ್ಞರ ಸಮಿತಿ ಚರ್ಚೆ ಮಾಡಿದೆ ಎಂದರು.

21 ನೇ ಶತಮಾನಕ್ಕೆ ಯಾವ ಶಿಕ್ಷಣ ಬೇಕು ಅದನ್ನ ಜಾರಿ ಮಾಡಲಾಗಿದೆ.ನಮ್ಮ ಮಕ್ಕಳು ರಾಷ್ಟ್ರೀಯ ಮಟ್ಟದಲ್ಲಿ ಪೈಪೋಟಿ ನಡೆಸಬೇಕಾಗಿದೆ ಅದಕ್ಕಾಗಿ ಈ ಕೌಶಲ್ಯ.ಹೀಗಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡುತ್ತಿ ದ್ದೇವೆ ಎಂದರ.

ಭಾರತ ಭವಿಷ್ಯ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಮೋದಿ ಅಮೂಲಾಗ್ರ ಬದಲಾವಣೆ ತರಲು ಮುಂದಾಗಿದ್ದಾರೆ.ಇದು ಭಾರತೀಯರಿಂದ ಭಾರತೀ ಯರಿಗೋಸ್ಕರ.ಭಾರತೀಯ ಮಕ್ಕಳಿಗೋಸ್ಕರ ಆಗುತ್ತಿರುವ ಬದಲಾವಣೆ ಆಗಿದೆ ಎಂದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.